ನವದೆಹಲಿ: ಒಂದು ವೇಳೆ ಭಾರತ ಯುದ್ಧಕ್ಕೆ ಬಂದರೆ ನೇರವಾಗಿ ಗೆಲ್ಲಲು ಸಾಧ್ಯವಾಗದ ಪಾಕಿಸ್ತಾನ ಈಗ ಕಳ್ಳದಾರಿ ಹಿಡಿದಿದೆ. ಪಹಲ್ಗಾಮ್ ದಾಳಿ ಬಳಿಕ ಭಾರತದಿಂದ ಎದುರಾಗಬಹುದಾದ ಅಪಾಯ ಎದುರಿಸಲು ಪಾಕ್ ಇನ್ನಿಲ್ಲದ ಹರಸಾಹಸ ಮಾಡುತ್ತಿದೆ.
ಭಾರತ ಗಡಿಯಲ್ಲಿ ಸೇನೆಯನ್ನು ಸನ್ನದ್ಧಗೊಳಿಸುತ್ತಿರುವುದನ್ನು ನೋಡಿಯೇ ಪಾಕಿಸ್ತಾನ ಭಯಗೊಂಡಿದೆ. ಈ ಕಾರಣಕ್ಕೆ ತನ್ನ ಮೇಲೆ ದಾಳಿ ನಡೆಸಬಹುದು ಎಂದು ವಿದೇಶೀ ಶಕ್ತಿಗಳ ನೆರವಿಗೆ ಕೈಚಾಚುತ್ತಿದೆ. ಆದರೆ ಅಮೆರಿಕಾ ಈಗಾಗಲೇ ಪಾಕಿಸ್ತಾನಕ್ಕೆ ಬುದ್ಧಿ ಹೇಳಿದೆ. ಟರ್ಕಿ ಕೂಡಾ ಆಯುಧ ಸರಬರಾಜು ಮಾಡಲ್ಲ ಎಂದಿದೆ.
ಇನ್ನೊಂದೆಡೆ ಭಾರತದ ಯೋಜನೆ ಏನು ಎಂಬುದು ಇನ್ನೂ ಸ್ಪಷ್ಟವಾಗುತ್ತಿಲ್ಲ. ಈ ಕಾರಣಕ್ಕೆ ಪಾಕಿಸ್ತಾನ ಈಗ ಹ್ಯಾಕರ್ ಗಳ ಮೊರೆ ಹೋಗಿದೆ. ಹ್ಯಾಕರ್ ಗಳನ್ನು ಬಳಸಿಕೊಂಡು ಭಾರತದ ಪ್ರಮುಖ ಭದ್ರತಾ ಸಂಸ್ಥೆಗಳ ಸಿಸ್ಟಂ, ವೆಬ್ ಸೈಟ್ ಹ್ಯಾಕ್ ಮಾಡಲು ಪ್ರಯತ್ನಿಸುತ್ತಿದೆ. ಈ ಮೂಲಕ ಮಾಹಿತಿ ಕದಿಯಲು ಯತ್ನಿಸುತ್ತಿದೆ.
ಆದರೆ ಇದನ್ನು ಭಾರತದ ಸೈಬರ್ ಭದ್ರತಾ ವಿಭಾಗ ಯಶಸ್ವಿಯಾಗಿ ಮೆಟ್ಟಿನಿಂತಿದ್ದು ಪಾಕಿಸ್ತಾನದ ಕಳ್ಳ ಬುದ್ಧಿಗೆ ತಕ್ಕ ಪಾಠ ಕಲಿಸಿದೆ.