Select Your Language

Notifications

webdunia
webdunia
webdunia
webdunia

ಅಧ್ಯಕ್ಷರಾದ ಕೂಡಲೇ ರವಿಶಾಸ್ತ್ರಿಯನ್ನು ಕಿತ್ತು ಹಾಕ್ತೀರಾ ಎಂದಿದ್ದಕ್ಕೆ ಗಂಗೂಲಿ ಹೇಳಿದ್ದೇನು ಗೊತ್ತಾ?

ಅಧ್ಯಕ್ಷರಾದ ಕೂಡಲೇ ರವಿಶಾಸ್ತ್ರಿಯನ್ನು ಕಿತ್ತು ಹಾಕ್ತೀರಾ ಎಂದಿದ್ದಕ್ಕೆ ಗಂಗೂಲಿ ಹೇಳಿದ್ದೇನು ಗೊತ್ತಾ?
ಮುಂಬೈ , ಗುರುವಾರ, 17 ಅಕ್ಟೋಬರ್ 2019 (10:34 IST)
ಮುಂಬೈ: ಸೌರವ್ ಗಂಗೂಲಿ ಮತ್ತು ರವಿಶಾಸ್ತ್ರಿ ನಡುವಿನ ವೈಮನಸ್ಯ ಹಳೆಯದ್ದು. ಆದರೆ ಈಗ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗುತ್ತಿದ್ದಾರೆ. ಸಹಜವಾಗಿಯೇ ಟೀಂ ಇಂಡಿಯಾ ಕೋಚ್ ಆಗಿರುವ ರವಿಶಾಸ್ತ್ರಿ ಜತೆ ಕೆಲಸ ಮಾಡಬೇಕಾಗುತ್ತದೆ.


ಆದರೆ ಗಂಗೂಲಿ ಅಧ್ಯಕ್ಷರಾದ ಕೂಡಲೇ ರವಿಶಾಸ್ತ್ರಿಯನ್ನು ಕೋಚ್ ಸ್ಥಾನದಿಂದ ವಜಾಗೊಳಿಸಬೇಕು ಎಂದು ಟ್ವಿಟರಿಗರು ಆಗ್ರಹಿಸಿದ್ದಾರೆ. ಈ ಬಗ್ಗೆ ಪತ್ರಕರ್ತರೊಬ್ಬರು ಗಂಗೂಲಿಗೆ ಪ್ರಶ್ನಿಸಿದಾಗ ಅವರು ಹೇಳಿದ್ದೇನು ಗೊತ್ತಾ?

ನೀವು ಅಧ್ಯಕ್ಷರಾದ ಕೂಡಲೇ ರವಿಶಾಸ್ತ್ರಿ ಮೇಲೆ ಕ್ರಮ ಕೈಗೊಳ್ಳುತ್ತೀರಾ ಎಂದು ಪತ್ರಕರ್ತರೊಬ್ಬರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ನಗುತ್ತಲೇ ತಮಾಷೆಯಾಗಿ ಉತ್ತರಿಸಿದ ಗಂಗೂಲಿ ‘ಯಾಕೆ? ರವಿಶಾಸ್ತ್ರಿ ಈಗ ಏನು ಮಾಡಿದರು?’ ಎಂದು ಕಾಲೆಳೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ಟೋಬರ್ 24 ಕ್ಕೆ ಧೋನಿ ವಿಚಾರ ಇತ್ಯರ್ಥ ಎಂದ ನಿಯೋಜಿತ ಅಧ್ಯ ಕ್ಷ ಸೌರವ್ ಗಂಗೂಲಿ