Select Your Language

Notifications

webdunia
webdunia
webdunia
webdunia

ಅಕ್ಟೋಬರ್ 24 ಕ್ಕೆ ಧೋನಿ ವಿಚಾರ ಇತ್ಯರ್ಥ ಎಂದ ನಿಯೋಜಿತ ಅಧ್ಯ ಕ್ಷ ಸೌರವ್ ಗಂಗೂಲಿ

ಅಕ್ಟೋಬರ್ 24 ಕ್ಕೆ ಧೋನಿ ವಿಚಾರ ಇತ್ಯರ್ಥ ಎಂದ ನಿಯೋಜಿತ ಅಧ್ಯ    ಕ್ಷ ಸೌರವ್ ಗಂಗೂಲಿ
ಮುಂಬೈ , ಗುರುವಾರ, 17 ಅಕ್ಟೋಬರ್ 2019 (10:04 IST)
ಮುಂಬೈ: ಬಿಸಿಸಿಐ ಅಧ್ಯಕ್ಷರಾಗಿ ಅಕ್ಟೋಬರ್ 23 ರಂದು ಅಧಿಕೃತವಾಗಿ ಆಯ್ಕೆಯಾಗಲಿರುವ ಸೌರವ್ ಗಂಗೂಲಿ ಅಧಿಕಾರ ಸ್ವೀಕರಿಸಿದ ಮರುದಿನವೇ ಧೋನಿ ವಿಚಾರ ಇತ್ಯರ್ಥ ಮಾಡುವುದಾಗಿ ಹೇಳಿದ್ದಾರೆ.


ಧೋನಿ ಟೀಂ ಇಂಡಿಯಾದಲ್ಲಿ ಮುಂದುವರಿಯಬೇಕೋ ಅಥವಾ ಭವಿಷ್ಯದ ದೃಷ್ಟಿಯಿಂದ ನಿವೃತ್ತಿಯಾಗಬೇಕೋ ಎಂಬ ವಿಚಾರ ಭಾರೀ ಚರ್ಚೆಯಾಗುತ್ತಿದೆ. ಈ ನಡುವೆ ಧೋನಿ ಮಾತ್ರ ಈ ಬಗ್ಗೆ ತುಟಿ ಪಿಟಕ್ ಎನ್ನದೇ ಸುದೀರ್ಘ ಸಮಯದಿಂದ ತಂಡದಿಂದ ಬಿಡುವು ಪಡೆದಿದ್ದಾರೆ.

‘ಅಕ್ಟೋಬರ್ 24 ಕ್ಕೆ ಆಯ್ಕೆ ಸಮಿತಿ ಸದಸ್ಯರನ್ನು ಭೇಟಿಯಾಗಿ ಧೋನಿ ಭವಿಷ್ಯದ ಬಗ್ಗೆ ಚರ್ಚಿಸುವೆ. ಬಳಿಕ ಧೋನಿ ಜತೆಗೂ ಮಾತನಾಡಿ ಅವರ ಮನಸ್ಸಲ್ಲಿ ಏನಿದೆ ಎಂದು ತಿಳಿದುಕೊಳ್ಳುವೆ. ನನಗೆ ಇದುವರೆಗೆ ಧೋನಿ ವಿಚಾರ ಸ್ಪಷ್ಟವಾಗಿಲ್ಲ. ಹೀಗಾಗಿ ಅದಕ್ಕೊಂದು ಅಂತ್ಯ ನೀಡುವೆ’ ಎಂದು ಗಂಗೂಲಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನನಗೂ ಕೋಪ ಬರುತ್ತೆ! ಕೂಲ್ ಆಗಿರುವುದರ ಹಿಂದಿನ ರಹಸ್ಯ ಹೇಳಿದ ಧೋನಿ