Select Your Language

Notifications

webdunia
webdunia
webdunia
webdunia

ಸೌರವ್ ಗಂಗೂಲಿ ಇರುವಾಗ ಭಯವೇತ ಎಂದ ವೀರೇಂದ್ರ ಸೆಹ್ವಾಗ್

ವೀರೇಂದ್ರ ಸೆಹ್ವಾಗ್
ಮುಂಬೈ , ಬುಧವಾರ, 16 ಅಕ್ಟೋಬರ್ 2019 (09:21 IST)
ಮುಂಬೈ: ಟೀಂ ಇಂಡಿಯಾದಲ್ಲಿ ವೀರೇಂದ್ರ ಸೆಹ್ವಾಗ್ ಮಿಂಚುವುದಕ್ಕೆ ಪ್ರಮುಖ ಕಾರಣವೇ ಸೌರವ್ ಗಂಗೂಲಿ. ಸೆಹ್ವಾಗ್ ರನ್ನು ಬೆಳೆಸಲು ತಮ್ಮ ಮೆಚ್ಚಿನ ಆರಂಭಿಕ ಸ್ಥಾನವನ್ನೇ ಬಿಟ್ಟುಕೊಟ್ಟಿದ್ದ ನಾಯಕ ದಾದ.


ಇದೀಗ ಅದೇ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷ ಗಾದಿಯನ್ನು ಏರುತ್ತಿರುವುದಕ್ಕೆ ವೀರೇಂದ್ರ ಸೆಹ್ವಾಗ್ ಸಂತಸದಿಂದ ಪ್ರತಿಕ್ರಿಯಿಸಿದ್ದಾರೆ. ತಮ್ಮ ಎಂದಿನ ಸ್ವಾರಸ್ಯಕರ ಶೈಲಿಯಲ್ಲಿ ಟ್ವೀಟ್ ಮಾಡಿ ತಮ್ಮ ಮೆಚ್ಚಿನ ನಾಯಕನಿಗೆ ಶುಭ ಕೋರಿದ್ದಾರೆ.

‘ಡೇರ್ ಹೇ ತೋ ಅಂದೇರ್ ನಹೀ’ ಎಂದಿದ್ದಾರೆ. ಅಂದರೆ ಗಂಗೂಲಿಯ ಧೈರ್ಯವಿರುವಾಗ ಅಂಧಕಾರವಿರಲ್ಲ ಎಂದಿರುವ ಸೆಹ್ವಾಗ್, ಭಾರತೀಯ ಕ್ರಿಕೆಟ್ ಗೆ ಇದು ಶುಭ ಸೂಚನೆ. ಭಾರತೀಯ ಕ್ರಿಕೆಟ್ ಗೆ ಈಗಾಗಲೇ ನೀವು ನೀಡಿರುವ ಸೇವೆ ಇನ್ನಷ್ಟು ಮುಂದುವರಿಯಲಿ ಎಂದು ಹಾರೈಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿಯಲ್ಲಿ ಶೊಯೇಬ್ ಅಖ್ತರ್ ಕಂಡ ‘ಪಾಕಿಸ್ತಾನಿ’ ಅಂಶ ಯಾವುದು ಗೊತ್ತಾ?!