Select Your Language

Notifications

webdunia
webdunia
webdunia
webdunia

ಆಸ್ಪತ್ರೆ ಸೇರಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಸಹ ಕ್ರಿಕೆಟಿಗನ ನೆರವಿಗೆ ಬಂದ ಗಂಗೂಲಿ

ಆಸ್ಪತ್ರೆ ಸೇರಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಸಹ ಕ್ರಿಕೆಟಿಗನ ನೆರವಿಗೆ ಬಂದ ಗಂಗೂಲಿ
ಕೋಲ್ಕೊತ್ತಾ , ಮಂಗಳವಾರ, 22 ಜನವರಿ 2019 (09:13 IST)
ಕೋಲ್ಕೊತ್ತಾ: ಬರೋಡಾ ಮೂಲದ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಜೇಕಬ್ ಮಾರ್ಟಿನ್ ಅಪಘಾತಕ್ಕೀಡಾಗಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.


ಮಾರ್ಟಿನ್ ಶ್ವಾಸಕೋಶ ಮತ್ತು ಲಿವರ್ ಗೆ ತೀವ್ರ ಹಾನಿಯಾಗಿದ್ದು, ಚಿಕಿತ್ಸೆಗೂ ಹಣವಿಲ್ಲದೇ ಕುಟುಂಬ ವರ್ಗ ಬಿಸಿಸಿಐಗೆ ನೆರವಿನ ಮೊರೆ ಇಟ್ಟಿತ್ತು. ಕೂಡಲೇ ಸ್ಪಂದಿಸಿರುವ ಬಿಸಿಸಿಐ ಮಾರ್ಟಿನ್ ಆಸ್ಪತ್ರೆ ಖರ್ಚನ್ನು ಪಾವತಿಸಿದೆ. ಇದರಿಂದಾಗಿ ಆಸ್ಪತ್ರೆ ಅವರಿಗೆ ನೀಡುತ್ತಿದ್ದ ಚಿಕಿತ್ಸೆಯನ್ನೂ ಮುಂದುವರಿಸಿದೆ.

ಇದರ ನಡುವೆ ಮಾರ್ಟಿನ್ ಕ್ರಿಕೆಟ್ ‍ಗೆ ಪದಾರ್ಪಣೆ ಮಾಡಿದ್ದಾಗ ನಾಯಕರಾಗಿದ್ದ ಸೌರವ್ ಗಂಗೂಲಿ ದೌಡಾಯಿಸಿದ್ದಾರೆ. ಮಾರ್ಟಿನ್ ಕುಟುಂಬದ ಜತೆಗೆ ತಾವಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಗಂಗೂಲಿ ಎಷ್ಟು ಹಣ ಸಹಾಯ ಮಾಡಿದರು ಎಂಬುದು ಬಹಿರಂಗವಾಗಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಹಾರ್ದಿಕ್ ಪಾಂಡ್ಯ ಪ್ರಕರಣಕ್ಕೆ ಮಂಗಳ ಹಾಡಲು ಒತ್ತಡ ಹಾಕಿದೆಯೇ ಮುಂಬೈ ಇಂಡಿಯನ್ಸ್?