Select Your Language

Notifications

webdunia
webdunia
webdunia
webdunia

ಮಂಗಳೂರಿಗೆ ಎಂದೆಂದಿಗೂ ಚಿರ ಋಣಿ: ಕೆಎಲ್ ರಾಹುಲ್

KL Rahul

Krishnaveni K

ಮಂಗಳೂರು , ಗುರುವಾರ, 18 ಜನವರಿ 2024 (09:00 IST)
Photo Courtesy: Twitter
ಮಂಗಳೂರು: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಇಂದು ತಮ್ಮ ತವರು ದಕ್ಷಿಣ ಕನ್ನಡದ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ.

ಕೊಲ್ಲೂರು ಮೂಕಾಂಬಿಕಾ ದೇವಾಲಯ, ಧರ್ಮಸ್ಥಳ ಮಂಜುನಾಥ ದೇವಾಲಯ, ಸೌತಡ್ಕ ಮಹಾಗಣಪತಿ ದೇವಾಲಯ ಮತ್ತು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಕೆಎಲ್ ರಾಹುಲ್ ಸದ್ಯಕ್ಕೆ ಟೀಂ ಇಂಡಿಯಾದಿಂದ ಬ್ರೇಕ್ ಪಡೆದಿದ್ದಾರೆ. ಹೀಗಾಗಿ ತಮ್ಮ ತವರು ಮಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ರಾಹುಲ್ ಮೂಲತಃ ಮಂಗಳೂರಿನವರು. ಹೀಗಾಗಿ ಆಗಾಗ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.

ಕೇವಲ ದೇವಾಲಯ ಮಾತ್ರವಲ್ಲ, ಮಂಗಳೂರಿನ ಪಬ್ಬಾಸ್ ನಲ್ಲಿ ಐಸ್ ಕ್ರೀಂ ಸವಿಯುವುದೂ ಅವರಿಗೆ ಇಷ್ಟ. ಈ ಬಾರಿಯೂ ಅಲ್ಲಿಗೆ ಭೇಟಿ ನೀಡಿ ಗಡ್ ಬಡ್ ಸವಿದಿದ್ದಾರೆ. ತಮ್ಮ ತವರಿಗೆ ಭೇಟಿ ನೀಡಿದ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅವರು ನಮ್ಮ ಕುಡ್ಲ (ಮಂಗಳೂರು)ಗೆ ಎಂದೆಂದಿಗೂ ಚಿರ ಋಣಿ ಎಂದು ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

INDvsAFG T20I: ರೋಹಿತ್-ರಿಂಕು ಅಬ್ಬರಕ್ಕೆ 5 ಓವರ್ ನಲ್ಲಿ 103 ರನ್!