Select Your Language

Notifications

webdunia
webdunia
webdunia
webdunia

ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಗೆ ಕೋಚ್ ದ್ರಾವಿಡ್ ದೂರು!

ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಗೆ ಕೋಚ್ ದ್ರಾವಿಡ್ ದೂರು!
ಕಾನ್ಪುರ , ಸೋಮವಾರ, 29 ನವೆಂಬರ್ 2021 (08:40 IST)
ಕಾನ್ಪುರ: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆನ್ ಫೀಲ್ಡ್ ಅಂಪಾಯರ್ ನಿತಿನ್ ಮೆನನ್ ಮತ್ತು ರವಿಚಂದ್ರನ್ ಅಶ್ವಿನ್ ನಡುವೆ ನಡೆದ ಮಾತಿನ ಚಕಮಕಿಗೆ ಸಂಬಂಧಪಟ್ಟಂತೆ ಕೋಚ್ ದ್ರಾವಿಡ್ ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಗೆ ದೂರು ನೀಡಿದ್ದಾರೆ.

ಅಶ್ವಿನ್ ಬೌಲಿಂಗ್ ರನ್ ಅಪ್ ಬಗ್ಗೆ ಅಂಪಾಯರ್ ನಿತಿನ್ ಮೆನನ್ ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಅಶ್ವಿನ್, ನಾಯಕ ಅಜಿಂಕ್ಯಾ ರೆಹಾನೆ ಹಾಗೂ ಆಂಪಾಯರ್ ನಡುವೆ ಮೈದಾನದಲ್ಲಿ ಮಾತಿನ ಚಕಮಕಿ ನಡೆದಿತ್ತು.

ಈ ವಿಚಾರದಲ್ಲಿ ರಾಹುಲ್ ದ್ರಾವಿಡ್ ಗೂ ಅಂಪಾಯರ್ ನಡೆ ಅಸಮಾಧಾನವುಂಟು ಮಾಡಿತ್ತು. ಹೀಗಾಗಿ ಈ ವಿಚಾರವನ್ನು ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಗಮನಕ್ಕೆ ತಂದಿದ್ದಾರೆ. ಘಟನೆ ಬಗ್ಗೆ ತಮ್ಮ ನಿಲುವು ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೇಯಸ್ ಐಯರ್ ಯಶಸ್ಸಿಗೆ ಕಾರಣವಾದ ರಾಹುಲ್ ದ್ರಾವಿಡ್ ಮಂತ್ರ