Select Your Language

Notifications

webdunia
webdunia
webdunia
webdunia

ಚಿತ್ರ ವಿಮರ್ಶೆ: ದಿಲ್ ಬೇಚಾರದಲ್ಲಿ ಸಾವಿನ ಬಗ್ಗೆ ಸಂದೇಶ ನೀಡಿದ್ದ ಸುಶಾಂತ್ ಸಿಂಗ್ ರಜಪೂತ್!

ಚಿತ್ರ ವಿಮರ್ಶೆ: ದಿಲ್ ಬೇಚಾರದಲ್ಲಿ ಸಾವಿನ ಬಗ್ಗೆ ಸಂದೇಶ ನೀಡಿದ್ದ ಸುಶಾಂತ್ ಸಿಂಗ್ ರಜಪೂತ್!
ಮುಂಬೈ , ಭಾನುವಾರ, 26 ಜುಲೈ 2020 (11:59 IST)
ಮುಂಬೈ: ಇಬ್ಬರು ಕ್ಯಾನ್ಸರ್ ಪೇಷೆಂಟ್ ಗಳು. ಇಬ್ಬರೂ ಜೀವನದ ಬಗ್ಗೆ ಏನೇನೋ ಕನಸುಗಳನ್ನಿಟ್ಟುಕೊಂಡಿರುತ್ತಾರೆ. ಜೀವನ ಇಂದೋ ನಾಳೆಯೋ ಮುಗಿಯುತ್ತದೆ ಎಂದು ಗೊತ್ತಿದ್ದರೂ ಇರುವಷ್ಟು ದಿನ ಖುಷಿಯಾಗಿರಲು ಬಯಸುತ್ತಾರೆ. ಆದರೆ ಎಲ್ಲಾ ಕತೆಯಂತೆ ಇವರದ್ದು ಹ್ಯಾಪೀ ಎಂಡಿಂಗ್ ಆಗುವುದಿಲ್ಲ.


ಇದು ಸುಶಾಂತ್ ಸಿಂಗ್ ರಜಪೂತ್ ಕೊನೆಯದಾಗಿ ಅಭಿನಯಿಸಿದ್ದ ‘ದಿಲ್ ಬೇಚಾರ’ ಸಿನಿಮಾದ ಒನ್ ಲೈನ್. ಸಿನಿಮಾದ ಆರಂಭದಲ್ಲೇ ಸುಶಾಂತ್ ಲವ ಲವಿಕೆಯಿಂದ ನಟಿಸಿದ್ದಾರೆ. ಅರೇ ಇವರಿಗೆ ಕ್ಯಾನ್ಸರ್ರಾ? ಅಯ್ಯೋ ಇವರ ಜೀವನ ಹೀಗೆ ಆಗೋಯ್ತಲ್ಲಾ ಎಂದು ನಮಗೇ ಅನಿಸುವಷ್ಟು ಬೇಸರವಾಗುತ್ತದೆ.

ಆದರೆ ನಡುವಿನ ಸಮಯದಲ್ಲಿ ಸುಶಾಂತ್ ಹಾಗೂ ಸಂಜನಾ ಜೋಡಿ ನಮಗೆ ಪ್ರೀತಿಯ ಕಚಗುಳಿಯಿಡುತ್ತದೆ. ಸಣ್ಣ ಪುಟ್ಟದ್ದರಲ್ಲೇ ಸಿಗುವ ಸಂತೋಷವನ್ನು ಅರ್ಥ ಮಾಡಿಸುತ್ತಾರೆ. ಕೊನೆಯದಾಗಿ ಸುಶಾಂತ್ ಹುಟ್ಟು, ಸಾವು ನಮ್ಮ ಕೈಯಲ್ಲಿಲ್ಲ. ಆದರೆ ಅದರ ನಡುವೆ ಬರುವ ಜೀವನವನ್ನು ಹೇಗೆ ಎದುರಿಸಬೇಕೆಂದು ನಾವೇ ನಿರ್ಧರಿಸಬಹುದು ಎನ್ನುತ್ತಾರೆ. ವಿಷಾಧವೆಂದರೆ ಅವರ ನಿಜ ಜೀವನದಲ್ಲಿ ಅದನ್ನು ಅವರು ಎದುರಿಸದೇ ಹೊರಟು ಹೋದರು.

ಇನ್ನು ಚಿತ್ರದುದ್ದಕ್ಕೂ ನಮ್ಮನ್ನು ಸೆರೆಹಿಡಿಯುವುದು ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ ಅವರ ಮ್ಯೂಸಿಕ್. ಉತ್ತಮ ಹಾಡುಗಳು ಮತ್ತೆ ಮತ್ತೆ ಕೇಳುವಂತಿದೆ. ಒಮ್ಮೆ ನೋಡಲು ಅಡ್ಡಿಯಿಲ್ಲದ ಸಿನಿಮಾ.

Share this Story:

Follow Webdunia kannada

ಮುಂದಿನ ಸುದ್ದಿ

ಇದ್ದಕ್ಕಿದ್ದ ಹಾಗೆ ದರ್ಶನ್ ‘ರಾಬರ್ಟ್’ ಚಿತ್ರತಂಡದಿಂದ ಇದೆಂಥಾ ಸುದ್ದಿ!