Select Your Language

Notifications

webdunia
webdunia
webdunia
webdunia

ಸುಶಾಂತ್ ರಜಪೂತ್ ಸಿಂಗ್ ರದ್ದು ಕೊಲೆ ಎಂದ ಕುಟುಂಬ! ಮರಣೋತ್ತರ ಪರೀಕ್ಷೆಯಲ್ಲಿ ಏನಿದೆ ಗೊತ್ತಾ?!

ಸುಶಾಂತ್ ರಜಪೂತ್ ಸಿಂಗ್ ರದ್ದು ಕೊಲೆ ಎಂದ ಕುಟುಂಬ! ಮರಣೋತ್ತರ ಪರೀಕ್ಷೆಯಲ್ಲಿ ಏನಿದೆ ಗೊತ್ತಾ?!
ಮುಂಬೈ , ಸೋಮವಾರ, 15 ಜೂನ್ 2020 (10:42 IST)
ಮುಂಬೈ: ಸುಶಾಂತ್ ಸಿಂಗ್ ರಜಪೂತ್ ರದ್ದು ಆತ್ಮಹತ್ಯೆಯಲ್ಲ, ಅವರನ್ನು ಉದ್ದೇಶಪೂರ್ವಕವಾಗಿ ಕೊಲೆ ಮಾಡಲಾಗಿದೆ ಎಂದು ಅವರ ಮಾವ ಆರೋಪಿಸಿದ್ದಾರೆ.


ಮಾಧ್ಯಮಗಳ ಮುಂದೆ ಮಾತನಾಡಿರುವ ಅವರ ಕುಟುಂಬಸ್ಥರು ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯಕ್ತಿಯಲ್ಲ. ಅವರನ್ನು ಬೇಕೆಂದೇ ಯಾರೋ ಕೊಲೆ ಮಾಡಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನು, ಸುಶಾಂತ್ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು, ಇದರಲ್ಲಿ ಕುತ್ತಿಗೆಗೆ ಬಿಗಿಯಾಗಿ ಕಟ್ಟಿದ್ದರಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಇದು ಆತ್ಮಹತ್ಯೆಯಿಂದಾದ ಸಾವು ಎಂದು ವರದಿ ಬಂದಿದೆ. ಹಾಗಿದ್ದರೂ ಅವರ ಅಂಗಾಂಗಗಳಲ್ಲಿ ವಿಷಾಂಶವಿದೆಯೇ ಎಂದು ಪರೀಕ್ಷಿಸಲು ಜೆಜೆ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಅದಲ್ಲದೆ, ಪೊಲೀಸರು ಅವರಿಗೆ ಆರು ತಿಂಗಳಿನಿಂದ ಮಾನಸಿಕ ಖಿನ್ನತೆಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರನ್ನು ವಿಚಾರಣೆ ಮಾಡಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸುಶಾಂತ್ ರಜಪೂತ್ ಸಿಂಗ್ ಅಂತ್ಯಕ್ರಿಯೆ ಇಂದು