Select Your Language

Notifications

webdunia
webdunia
webdunia
webdunia

ಭಾರತದತ್ತ ಶ್ರೀದೇವಿ ಅಂತಿಮ ಪಯಣ

ಭಾರತದತ್ತ ಶ್ರೀದೇವಿ ಅಂತಿಮ ಪಯಣ
ಮುಂಬೈ , ಮಂಗಳವಾರ, 27 ಫೆಬ್ರವರಿ 2018 (17:00 IST)
ಮುಂಬೈ: ಶನಿವಾರ ಸಂಜೆ ದುಬೈನಲ್ಲಿ ಸಾವನ್ನಪ್ಪಿದ ಬಾಲಿವುಡ್ ತಾರೆ ಶ್ರೀದೇವಿ ಮೃತದೇಹ ಎಲ್ಲಾ ಔಪಚಾರಿಕತೆಗಳನ್ನು ಪೂರೈಸಿ ಭಾರತದತ್ತ ಪ್ರಯಾಣ ಬೆಳೆಸಿದೆ.
 

ಮೋಹಕ ತಾರೆಯ ಅಂತಿಮ ಯಾತ್ರೆ ಕೊನೆಗೂ ಭಾರತದತ್ತ ಆರಂಭವಾಗಿದೆ. ಈಗಾಗಲೇ ದುಬೈ ಏರ್ ಪೋರ್ಟ್ ಗೆ ಶ್ರೀದೇವಿ ಮೃತದೇಹವನ್ನು ಹೊತ್ತ ಆಂಬ್ಯುಲೆನ್ಸ್ ಕರೆತಂದಿದ್ದು,  ಜೆಟ್ ವಿಮಾನ ಮೂಲಕ ಮುಂಬೈಗೆ ಬಂದಿಳಿಯಲಿದೆ.

ರಾತ್ರಿ 10 ಗಂಟೆ ಸುಮಾರಿಗೆ ಮುಂಬೈಗೆ ವಿಮಾನ ಬಂದಿಳಿಯುವ ನಿರೀಕ್ಷೆಯಿದೆ. ದುಬೈ ಪೊಲೀಸರು ವಿಚಾರಣೆ ಪೂರ್ಣಗೊಳಿಸಿ ಸಹಜ ಸಾವು ಎಂದು ಘೋಷಿಸಿದ ಬಳಿಕ ಕುಟುಂಬದವರಿಗೆ ಮೃತದೇಹ ಹಸ್ತಾಂತರಿಸಲಾಯಿತು. ನಾಳೆ ಬಾಲಿವುಡ್ ತಾರೆಯ ಅಂತಿಮ ವಿಧಿ ವಿಧಾನಗಳು ನಡೆಯುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳು ಚಿತ್ರದಲ್ಲಿ ನಟಿಸೋ ಆಸೆ ಇದೆ ಪ್ರಶಾಂತ್