Select Your Language

Notifications

webdunia
webdunia
webdunia
webdunia

ಎನ್. ಚಲುವರಾಯಸ್ವಾಮಿ ಚಿಲ್ಲರೆ ರಾಜಕಾರಣಿ: ಡಿ.ಸಿ.ತಮ್ಮಣ್ಣ

ಎನ್. ಚಲುವರಾಯಸ್ವಾಮಿ ಚಿಲ್ಲರೆ ರಾಜಕಾರಣಿ: ಡಿ.ಸಿ.ತಮ್ಮಣ್ಣ
ಬೆಂಗಳೂರು , ಸೋಮವಾರ, 30 ಏಪ್ರಿಲ್ 2018 (13:23 IST)
ನಾಗಮಂಗಲ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎನ್.ಚಲುವರಾಯಸ್ವಾಮಿ ಒಬ್ಬ ಚಿಲ್ಲರೆ ರಾಜಕಾರಣಿ ಎಂದು ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ವಾಗ್ದಾಳಿ ಟೀಕಿಸಿದ್ದಾರೆ. 
ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಕೆ.ಎಂ.ದೊಡ್ಡಿ ವ್ಯಾಪ್ತಿಯಲ್ಲಿ ಪ್ರಚಾರ ನಡೆಸುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಶಾಸಕನಾಗಿದ್ದಾಗ ಚಲುವರಾಯಸ್ವಾಮಿ ಇನ್ನು ಚಿಲ್ಲರೆ ರಾಜಕಾರಣ ಮಾಡಿಕೊಂಡಿದ್ದ. ಅವನು ಹೇಗೆ ಬೆಳೆದು ಬಂದ ಅನ್ನೋ ಇತಿಹಾಸ ನನಗೆ ಗೊತ್ತು.
 
 ಜೆಡಿಎಸ್ ನಲ್ಲಿ ಗೆದ್ದು ಕಾಂಗ್ರೆಸ್ ಪಕ್ಷಕ್ಕೆ ಶಾಸಕತ್ವವನ್ನ ಅಡವಿಟ್ಟ ಚಲುವರಾಯಸ್ವಾಮಿಗೆ ಜೆಡಿಎಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಚಲುವರಾಯಸ್ವಾಮಿ ಪಕ್ಷ ನಿಷ್ಠೆ, ಸ್ವಾಮಿ ನಿಷ್ಠೆ ಇಲ್ಲದವನು ಎಂದು ಟೀಕಿಸಿದ್ದಾರೆ. 
 
ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣರ ಈ ಹೇಳಿಕೆ ಎನ್.ಚಲುವರಾಸ್ವಾಮಿ ಅವರ ಅಭಿಮಾನಿಗಳನ್ನು ಕೆರಳಿಸಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀರಾಮುಲು ಹೆಲಿಕಾಪ್ಟರ್ ಗೆ ಜನರು ಪರೇಶಾನ್