Publish Date: Mon, 30 Apr 2018 (13:18 IST)
Updated Date: Mon, 30 Apr 2018 (13:22 IST)
ಕೊಪ್ಪಳ: ಹೆಲಿಕಾಪ್ಟರ್ ಧೂಳಿಗೆ ದೂಳಿಪಟವಾದ ಬಿಜೆಪಿ ಕಾರ್ಯಕರ್ತರು. ಬಿಜೆಪಿ ಸ್ಟಾರ್ ಪ್ರಚಾರಕ ಶ್ರೀ ರಾಮುಲು ಹೆಲಿಕಾಪ್ಟರ್ ಮೂಲಕ ಕೊಪ್ಪಳದ ಕುಷ್ಟಗಿಯ ಹನುಮನಾಳದಲ್ಲಿ ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲರಿಗೆ ಮತ ಕೇಳಲು ಶ್ರೀರಾಮುಲು ಬಂದಿದ್ದರು. ಹನಮನಾಳ ಖಾಸಗಿ ಕಾಲೇಜಿನ ಆವರಣದಲ್ಲಿ ಹೆಲಿಪ್ಯಾಡ ನಿರ್ಮಾಣ ಮಾಡಿದ್ದು, ನೆಲದ ಮೇಲಿಂದ ಮೇಲೆ ಹಾರುವಾಗ ಎದ್ದ ಧೂಳು ಕೆಲ ಕಾಲ ರಾಮುಲು ಅಭಿಮಾನಿಗಳನ್ನು ಉಸಿರುಗಟ್ಟಿಸಿತ್ತು.
ಧೂಳಿಗೆ ಹೆದರಿದ ಬಿಜೆಪಿ ಕಾರ್ಯ ಕರ್ತರು ಕಣ್ಣು ಕಾಣದ ನೆಲಕ್ಕೆ ಬಿದ್ದ ಘಟನೆ ನಡೆದಿದೆ.ವೇದಿಕೆಗೆ ಹೊಕ್ಕ ಧೂಳು ಸಂಪೂರ್ಣ ವಾಗಿ ಧೂಳು ವೇದಿಕೆಯಾವರಿಸಿದ್ದು ಎಲ್ಲರೂ ವೇದಿಕೆ ಖಾಲಿ ಮಾಡಿದ್ದಾರೆ.
ದೂರ ಸರಿ ರ್ರೀ ಧೂಳು ಬರುತ್ತೆ ಎಂದು ಹೇಳಲು ಹೋದ ಪೊಲೀಸರನ್ನು ಬಿಡದ ಧೂಳು ಪರೇಶಾನ್ ಮಾಡಿತು.