Publish Date: Mon, 30 Apr 2018 (13:15 IST)
Updated Date: Mon, 30 Apr 2018 (13:16 IST)
ಎನ್.ಚಲುವರಾಯಸ್ವಾಮಿ ಆಪ್ತನ ಮನೆ ಮೇಲೆ ಐಟಿ ದಾಳಿ ನಡೆದಿದೆ. ಚಲುವರಾಯಸ್ವಾಮಿ, ನಾಗಮಂಗಲ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.
ಉದ್ಯಮಿ ಲಕ್ಷ್ಮಿನಾರಾಯಣ್ ಮನೆ ಮೇಲೆ ಐಟಿ ದಾಳಿ ನಡೆದಿದೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿ ಸುಖಧರೆ ಗ್ರಾಮದಲ್ಲಿರುವ ಲಕ್ಷ್ಮಿನಾರಾಯಣ್ ನಿವಾಸದ ಮೇಲೆಬೆಂಗಳೂರು, ಮೈಸೂರಿನಿಂದ ಬಂದಿದ್ದ ಸುಮಾರು 30 ಅಧಿಕಾರಿಗಳಿಂದ ದಾಳಿ ನಡೆದಿದೆ.
ಲಕ್ಷ್ಮಿನಾರಾಯಣ್ ವಿಚಾರಣೆ ನಡೆಸಿ ಮನೆ ತಪಾಸಣೆ ನಡೆಸಿದ ಅಧಿಕಾರಿಗಳು.ಮನೆಯಲ್ಲಿ ಸಿಕ್ಕ 30 ಸಾವಿರ ಹಣವನ್ನು ವಿಚಾರಣೆ ಬಳಿಕ ವಾಪಸ್ ನೀಡಿದ ಅಧಿಕಾರಿಗಳು. ಅದೇ ಗ್ರಾಮದ ಚಲುವನಾರಾಯಣಸ್ವಾಮಿ ಮತ್ತಿಬ್ಬರು ಆಪ್ತರಾದ ಧನಂಜಯ್, ಬೆಟ್ಟೇಗೌಡ ಮನೆ ಮೇಲೂ ಐಟಿ ದಾಳಿ ನಡೆದಿದೆ.
ಚುನಾವಣೆಗೆ ಹಂಚಲು ಹಣ ಸಂಗ್ರಹಿಸಿ ಇಟ್ಟಿದ್ದಾರೆ ಎಂಬ ಆರೋಪದ ಮೇಲೆ ಐಟಿ ದಾಳಿ ಮಾಡಲಾಗಿದೆ.
jagadish
Publish Date: Mon, 30 Apr 2018 (13:15 IST)
Updated Date: Mon, 30 Apr 2018 (13:16 IST)