Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ನಲ್ಲಿ ಈಗ ಹಣ ಇದ್ದವರಿಗೇ ಮಣೆ: ಮಾಜಿ ಶಾಸಕ ಎನ್ ಸಂಪಂಗಿ ಆರೋಪ

ಕಾಂಗ್ರೆಸ್ ನಲ್ಲಿ ಈಗ ಹಣ ಇದ್ದವರಿಗೇ ಮಣೆ: ಮಾಜಿ ಶಾಸಕ ಎನ್ ಸಂಪಂಗಿ ಆರೋಪ
ಬೆಂಗಳೂರು , ಮಂಗಳವಾರ, 17 ಏಪ್ರಿಲ್ 2018 (07:37 IST)
ಬೆಂಗಳೂರು: ಬಾಗೇಪಲ್ಲಿ ಟಿಕೆಟ್ ಆಕಾಂಕ್ಷಿ ಮಾಜಿ ಶಾಸಕ ಎನ್ ಸಂಪಂಗಿ ಕಾಂಗ್ರೆಸ್ ವಿರುದ್ಧ ದೊಡ್ಡ ಆರೋಪ ಮಾಡಿದ್ದಾರೆ.

ಚಿಕ್ಕಮಗಳೂರು ಸಂಸದ ವೀರಪ್ಪ ಮೊಯಿಲಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಸಂಪಂಗಿ ನಿನ್ನೆ ಮತ್ತೆ ಅಸಮಾಧಾನ ಹೊರ ಹಾಕಿದ್ದಾರೆ. ವೀರಪ್ಪ ಮೊಯಿಲಿ ತಮ್ಮ ಆಪ್ತನಿಗೆ ಟಿಕೆಟ್ ಕೊಡಿಸಿರುವುದಕ್ಕೆ ಒಂದು ಕಾಲದಲ್ಲಿ ಮೊಯಿಲಿಗೆ ಆಪ್ತರಾಗಿದ್ದ ಸಂಪಂಗಿ ಆಕ್ರೋಶಗೊಂಡಿದ್ದಾರೆ.

ಕಾಂಗ್ರೆಸ್ ನಲ್ಲಿ ಈಗ ಹಣಬಲವೇ ಎಲ್ಲದಕ್ಕೂ ಮುಖ್ಯ. ಹಣವಿದ್ದವರಿಗೆ ಮಾತ್ರ ಟಿಕೆಟ್ ಸಿಕ್ಕಿದೆ. ಪಕ್ಷದ ನಿಷ್ಠಾವಂತರನ್ನು ಕಡೆಗಣಿಸಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಈಗಲೂ ಹೇಳುತ್ತೇನೆ, ಕಾಂಗ್ರೆಸ್ ಗೇ ಮತ ಹಾಕಿ: ಮಾತೆ ಮಹಾದೇವಿ ಪುನರುಚ್ಚಾರ