Select Your Language

Notifications

webdunia
webdunia
webdunia
webdunia

ಈಗಲೂ ಹೇಳುತ್ತೇನೆ, ಕಾಂಗ್ರೆಸ್ ಗೇ ಮತ ಹಾಕಿ: ಮಾತೆ ಮಹಾದೇವಿ ಪುನರುಚ್ಚಾರ

ಈಗಲೂ ಹೇಳುತ್ತೇನೆ, ಕಾಂಗ್ರೆಸ್ ಗೇ ಮತ ಹಾಕಿ: ಮಾತೆ ಮಹಾದೇವಿ ಪುನರುಚ್ಚಾರ
ಬೆಂಗಳೂರು , ಮಂಗಳವಾರ, 17 ಏಪ್ರಿಲ್ 2018 (07:34 IST)
ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಶಿಫಾರಸ್ಸು ಮಾಡಿರುವ ಕಾಂಗ್ರೆಸ್ ಗೇ ಮತ ಹಾಕಿ ಎಂದು ಮಾತೆ ಮಹಾದೇವಿ ಮತ್ತೆ ಮನವಿ ಮಾಡಿದ್ದಾರೆ.

‘ಯಾರೂ ಮಾಡದಂತಹ ಕೆಲಸ ಕಾಂಗ್ರೆಸ್ ಮಾಡಿದೆ. ಹಾಗಾಗಿ ನನ್ನ ಬೆಂಬಲಿಗರು,  ಸಮುದಾಯದವರಿಗೆ ಕಾಂಗ್ರೆಸ್ ಗೇ ಮತ ಹಾಕಿ ಎಂದು ಹೇಳುತ್ತೇನೆ. ನನ್ನ ಬೆಂಬಲಿಗರಿಗೆ ಟಿಕೆಟ್ ಕೇಳಿದ್ದು ನಿಜ. ಆದರೆ ಟಿಕೆಟ್ ಸಿಕ್ಕಿಲ್ಲ ಎಂದು ಹೇಳಿಕೆ ಬದಲಾಯಿಸಲ್ಲ. ಈಗಲೂ ಕಾಂಗ್ರೆಸ್ ನ್ನೇ ಬೆಂಬಲಿಸಿ ಎನ್ನುವೆ’ ಎಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತೆ ಮಹಾದೇವಿ ಪುನರುಚ್ಛರಿಸಿದ್ದಾರೆ.

ಈ ಮೊದಲು ಬಸವಕಲ್ಯಾಣ ಕ್ಷೇತ್ರದಲ್ಲಿ ತಮ್ಮ  ಆಪ್ತನಿಗೆ ಟಿಕೆಟ್ ಕೊಡಿಸುವಂತೆ ಮಾತೆ ಮಹಾದೇವಿ ಒತ್ತಾಯ ಮಾಡಿದ್ದರು ಎನ್ನಲಾಗಿತ್ತು. ಅದನ್ನು ಈಗ ಅವರು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಾದಾಮಿಯಲ್ಲಿ ಸ್ಪರ್ಧಿಸಲು ಒತ್ತಾಯ ಮಾಡಿದ ಕಾರ್ಯಕರ್ತರಿಗೆ ಸಿದ್ದರಾಮಯ್ಯ ಹೇಳಿದ್ದೇನು?