Select Your Language

Notifications

webdunia
webdunia
webdunia
webdunia

ವೀಕೆಂಡ್ ವಿತ್ ರಮೇಶ್ ಸಾಧಕರ ಸೀಟ್ ಗೆ ರಾಹುಲ್ ದ್ರಾವಿಡ್ ಕರೆತರಲು ಅಭಿಯಾನ ಶುರು

ವೀಕೆಂಡ್ ವಿತ್ ರಮೇಶ್ ಸಾಧಕರ ಸೀಟ್ ಗೆ ರಾಹುಲ್ ದ್ರಾವಿಡ್ ಕರೆತರಲು ಅಭಿಯಾನ ಶುರು
ಬೆಂಗಳೂರು , ಶುಕ್ರವಾರ, 19 ಏಪ್ರಿಲ್ 2019 (06:23 IST)
ಬೆಂಗಳೂರು: ಜೀ ಕನ್ನಡದಲ್ಲಿ ನಾಳೆಯಿಂದ ಆರಂಭವಾಗಲಿರುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಸಾಧಕರ ಸೀಟ್ ಗೆ ಭಾರತ ಕಂಡ ಶ್ರೇಷ್ಠ ಕ್ರಿಕೆಟಿಗ ರಾಹುಲ್ ದ್ರಾವಿಡ್ ರನ್ನು ಕರೆತರಲು ಚಾನೆಲ್ ಅಭಿಯಾನವೊಂದನ್ನು ಶುರು ಮಾಡಿದೆ.

 
ಸೀಸನ್ 1 ರಿಂದಲೂ ರಾಹುಲ್ ದ್ರಾವಿಡ್ ರನ್ನು ಸಾಧಕರ ಸೀಟ್ ಗೆ ಕರೆ ತನ್ನಿ ಎಂದು ಅಭಿಮಾನಿಗಳು ಒತ್ತಾಯಿಸುತ್ತಲೇ ಇದ್ದರು. ಈ ಕುರಿತು ಚಾನೆಲ್ ಕೂಡಾ ಅವರಿಗೆ ಪತ್ರ ಬರೆದು ಸಾಕಷ್ಟು ಪ್ರಯತ್ನ ಮಾಡಿದೆಯಂತೆ. ಆದರೆ ಅದು ಸಾಧ‍್ಯವಾಗಿರಲಿಲ್ಲ.

ಹೀಗಾಗಿ ನಾಲ್ಕನೇ ಸೀಸನ್ ನಲ್ಲಿಯಾದರೂ ದ್ರಾವಿಡ್ ರನ್ನು ಕರೆತರಲು ಟ್ವಿಟರ್ ಮೂಲಕ ಅಭಿಯಾನ ಶುರು ಮಾಡೋಣ ಎಂದು ಈ ಮೊದಲು ಜೀ ಕನ್ನಡ ಮುಖ್ಯಸ್ಥ ರಾಘವೇಂದ್ರ ಹುಣಸೂರು ಎಂದಿದ್ದರು.

ಅದರಂತೆ ಇದೀಗ ಜೀ ಕನ್ನಡ ತನ್ನ ಅಧಿಕೃತ ಟ್ವಿಟರ್ ಪೇಜ್ ನಲ್ಲಿ #WWRDravid ಎಂಬ ಹ್ಯಾಶ್ ಟ್ಯಾಗ್ ನಡಿಯಲ್ಲಿ ಅಭಿಯಾನವೊಂದನ್ನು ಶುರು ಮಾಡಿದೆ. ಈ ಹ್ಯಾಶ್ ಟ್ಯಾಗ್ ಮಾಡಿದ ಟ್ವೀಟ್ ನ್ನು ರಿಟ್ವೀಟ್ ಮಾಡುವ ಮೂಲಕ ರಾಹುಲ್ ದ್ರಾವಿಡ್ ರನ್ನು ಕಾರ್ಯಕ್ರಮಕ್ಕೆ ಕರೆತರುವ ಪ್ರಯತ್ನ ಮಾಡೋಣ ಎಂದು ಜೀ ಕನ್ನಡ ಕರೆಕೊಟ್ಟಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಹಾರ್ಪಿಕ್ ಬಾಟಲ್ ಥರಾ ಡ್ರೆಸ್ ಮಾಡಿ ಟ್ರೋಲ್ ಆದ ರಣವೀರ್ ಸಿಂಗ್!