Select Your Language

Notifications

webdunia
webdunia
webdunia
webdunia

ಮತ್ತೆ ಧಾರವಾಹಿಗೆ ಬರ್ತಿದ್ದಾರೆ ನಟ ವಿಜಯ್ ಸೂರ್ಯ

ಮತ್ತೆ ಧಾರವಾಹಿಗೆ ಬರ್ತಿದ್ದಾರೆ ನಟ ವಿಜಯ್ ಸೂರ್ಯ
ಬೆಂಗಳೂರು , ಶನಿವಾರ, 4 ಡಿಸೆಂಬರ್ 2021 (12:05 IST)
ಬೆಂಗಳೂರು: ನಟ ವಿಜಯ್ ಸೂರ್ಯ ಕಿರುತೆರೆಯ ಮೋಸ್ಟ್ ವಾಂಟೆಡ್ ನಟ. ಜೊತೆಗೆ ಸ್ಯಾಂಡಲ್ ವುಡ್ ನಲ್ಲೂ ಸಿನಿಮಾಗಳನ್ನು ಮಾಡುತ್ತಿದ್ದಾರೆ.

ಅಗ್ನಿಸಾಕ್ಷಿ ಧಾರವಾಹಿ ಬಳಿಕ ವಿಜಯ್ ಸೂರ್ಯ ಸ್ಟಾರ್ ಸುವರ್ಣದಲ್ಲಿ ಪ್ರೇಮಲೋಕ, ಜೊತೆ ಜೊತೆಯಲಿ ಧಾರವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಹಾಗಿದ್ದರೂ ಅಗ್ನಿ ಸಾಕ್ಷಿ ಧಾರವಾಹಿಯಲ್ಲಿ ಸಿಕ್ಕ ಖ್ಯಾತಿ ಅವರಿಗೆ ಬೇರೆಲ್ಲೂ ಸಿಕ್ಕಿರಲಿಲ್ಲ.

ಇದೀಗ ಹೊಸ ಧಾರವಾಹಿಯೊಂದಿಗೆ ಮತ್ತೆ ಕಿರುತೆರೆಗೆ ಮರಳುತ್ತಿದ್ದಾರೆ. ಜೀ ಕನ್ನಡ ವಾಹಿನಿಯ ಹೊಸ ಧಾರವಾಹಿ ‘ಡಾ.ಕರ್ಣ’ ಎನ್ನುವ ಧಾರವಾಹಿಗೆ ವಿಜಯ್ ಸೂರ್ಯ ನಾಯಕರಾಗಿದ್ದಾರೆ. ವಿಶೇಷವೆಂದರೆ ಈ ಧಾರವಾಹಿಗೆ ವಿಜಯ್ ಸೂರ್ಯ ಹಿಟ್ ಪೇರ್ ವೈಷ್ಣವಿ ನಾಯಕಿಯಾಗಲಿದ್ದಾರೆ ಎಂಬ ಸುದ್ದಿಗಳಿವೆ. ಒಂದು ವೇಳೆ ಮತ್ತೆ ಕಿರುತೆರೆಯ ಈ ಸೂಪರ್ ಹಿಟ್ ಜೋಡಿ ಒಂದಾದರೆ ಪ್ರೇಕ್ಷಕರಿಗೆ ಥ್ರಿಲ್ ಆಗುವುದು ಖಂಡಿತಾ. ಸದ್ಯದಲ್ಲೇ ಈ ಧಾರವಾಹಿ ಲಾಂಚ್ ಆಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಡುಗಡೆ ದಿನಾಂಕ ಘೋಷಿಸಿದ ಮತ್ತಷ್ಟು ಸಿನಿಮಾಗಳು