Select Your Language

Notifications

webdunia
webdunia
webdunia
webdunia

ಜೀ ಕುಟುಂಬ ಅವಾರ್ಡ್ ನಲ್ಲಿ ದರ್ಶನ್-ಕಿಚ್ಚ ಸುದೀಪ್!

ಜೀ ಕುಟುಂಬ ಅವಾರ್ಡ್ ನಲ್ಲಿ ದರ್ಶನ್-ಕಿಚ್ಚ ಸುದೀಪ್!
ಬೆಂಗಳೂರು , ಗುರುವಾರ, 28 ಅಕ್ಟೋಬರ್ 2021 (10:16 IST)
ಬೆಂಗಳೂರು: ಜೀ ಕನ್ನಡ ವಾಹಿನಿಯ ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಕಿಚ್ಚ ಸುದೀಪ್ ಅತಿಥಿಯಾಗಿ ವೇದಿಕೆಗೆ ಬಂದಿದ್ದಾರೆ. ಈ ವೇಳೆ ಅಪರೂಪದ ವಿದ್ಯಮಾನವೊಂದು ನಡೆದಿದೆ.

ಸುದೀಪ್-ದರ್ಶನ್ ಒಟ್ಟಿಗಿರುವ ಫೋಟೋವನ್ನು ಪ್ರಕಟಿಸಿ ಈ ಫೋಟೋ ಬಗ್ಗೆ ಮಾತನಾಡಿ ಎಂದು ಆಂಕರ್ ಅನುಶ್ರೀ ಕೇಳಿಕೊಳ್ಳುತ್ತಾರೆ. ಎಲ್ಲರಿಗೂ ಗೊತ್ತಿರುವ ಹಾಗೆ ದರ್ಶನ್-ಸುದೀಪ್ ಒಂದು ಕಾಲದಲ್ಲಿ ಕುಚಿಕು ಗೆಳೆಯರಾಗಿದ್ದರು. ಆದರೆ ಈಗ ಇಬ್ಬರೂ ಜೊತೆಗಿಲ್ಲ.

ಆದರೆ ಕಿಚ್ಚ ಈ ಫೋಟೋಗೆ ಪ್ರತಿಕ್ರಿಯಿಸಿದ್ದು, ದರ್ಶನ್ ಯಾವತ್ತೂ ನನ್ನ ಸ್ನೇಹಿತನೇ. ಒಟ್ಟಿಗಿಲ್ಲ ಎಂದ ಮಾತ್ರಕ್ಕೆ ಯಾವತ್ತೂ ಅವನಿಗೆ ಕೆಟ್ಟದ್ದು ಬಯಸಿಲ್ಲ. ಕೆಟ್ಟದ್ದು ಮಾತನಾಡಿಲ್ಲ ಎಂದಿದ್ದಾರೆ. ಕಿಚ್ಚನ ಹೇಳಿಕೆ ಇಬ್ಬರೂ ಒಂದಾಗಲಿ ಎಂದು ಕಾಯುತ್ತಿರುವ ಅಭಿಮಾನಿಗಳಲ್ಲಿ ಪುಳಕ ತಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸುನಿಲ್ ಶೆಟ್ಟಿ ಪುತ್ರನ ಸಿನಿಮಾಗೆ ಕಿಚ್ಚ ಸುದೀಪ್ ಬೆಂಬಲ