Publish Date: Thu, 20 Jun 2019 (08:49 IST)
Updated Date: Thu, 20 Jun 2019 (08:51 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಈ ವಾರದ ಅತಿಥಿ ಹಾಸ್ಯ ನಟರಾಗಿ ಈಗ ಸ್ಯಾಂಡಲ್ ವುಡ್ ನಲ್ಲಿ ನಂ.1 ಎನಿಸಿಕೊಂಡಿರುವ ಚಿಕ್ಕಣ್ಣ ಹಾಗೂ ಹಿರಿಯ ಪೋಷಕ ನಟ ಬಿರಾದರ್.
ಕಳೆದ ವಾರ ಸಾಧಕರ ಸೀಟ್ ನಲ್ಲಿ ಹಾಸ್ಯ ನಟರಾಗಿ ಚಿತ್ರರಂಗಕ್ಕೆ ಬಂದು ನಂತರ ನಾಯಕ ನಟನಾಗಿ ಮಿಂಚುತ್ತಿರುವ ಶರಣ್ ಅವರ ಜೀವನದ ಕತೆ ಹೇಳಲಾಗಿತ್ತು. ಈ ಎಪಿಸೋಡ್ ನ್ನು ವೀಕ್ಷಕರು ಮೆಚ್ಚಿಕೊಂಡಿದ್ದರು.
ಈ ವಾರ ಚಿಕ್ಕಣ್ಣ ಮತ್ತು ಬಿರಾದರ್ ಆಗಮಿಸುತ್ತಿದ್ದಾರೆ. ಇವರಿಬ್ಬರನ್ನೂ ಸಾಧಕರ ಸೀಟ್ ಗೆ ಕರೆತರಲು ಕೆಲವು ವೀಕ್ಷಕರು ಇದಕ್ಕೂ ಮೊದಲು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದರು. ಅದರಂತೆ ಈಗ ಇಬ್ಬರೂ ತಮ್ಮ ಜೀವನ ಕತೆಯನ್ನು ಬಿಚ್ಚಿಡಲಿದ್ದಾರೆ.