Publish Date: Wed, 15 Jul 2020 (08:49 IST)
Updated Date: Wed, 15 Jul 2020 (08:51 IST)
ಬೆಂಗಳೂರು: ಲಾಕ್ ಡೌನ್ ನಿಂದಾಗಿ ರೇಟಿಂಗ್ ಕಡಿಮೆಯಾಗಿರುವ ಕಾರಣಕ್ಕೆ ಉದಯ ವಾಹಿನಿಯ ಜನಪ್ರಿಯ ಫ್ಯಾಂಟಸಿ ಧಾರವಾಹಿ ‘ನಂದಿನಿ’ ಕತೆ ಮುಗಿಸುತ್ತಿದೆ.
ಈ ತಿಂಗಳು ಮಾತ್ರ ಧಾರವಾಹಿ ಪ್ರಸಾರವಾಗಲಿದೆ. ನಟ, ನಿರ್ದೇಶಕ ರಮೇಶ್ ಅರವಿಂದ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ನಂದಿನಿ ಧಾರವಾಹಿ ಉದಯ ವಾಹಿನಿಯ ನಂ. ಧಾರವಾಹಿ ಆಗಿತ್ತು. ಆದರೆ ಇದೀಗ ಲಾಕ್ ಡೌನ್ ಬಳಿಕ ಧಾರವಾಹಿ ಪ್ರಾರಂಭವಾದಾಗ ರೇಟಿಂಗ್ ಗಣನೀಯವಾಗಿ ಇಳಿಮುಖವಾಗಿತ್ತು.
ಇದೇ ಕಾರಣಕ್ಕೆ ನಂದಿನಿ ಧಾರವಾಹಿ ತಂಡ ಪ್ರಸಾರ ನಿಲ್ಲಿಸಲು ನಿರ್ಧರಿಸಿದೆ. ಜುಲೈ 31 ರಂದು ಕೊನೆಯ ಸಂಚಿಕೆ ಪ್ರಸಾರವಾಗಲಿದೆ.