Select Your Language

Notifications

webdunia
webdunia
webdunia
webdunia

ಆತ್ಮಹತ್ಯೆ ಮಾಡಿಕೊಂಡ ಸುಶೀಲ್ ಗೌಡ ಬಗ್ಗೆ ನಿಜ ವಿಚಾರ ಬಹಿರಂಗಪಡಿಸಿದ ನಟ ಚಂದನ್ ಕುಮಾರ್

ಆತ್ಮಹತ್ಯೆ ಮಾಡಿಕೊಂಡ ಸುಶೀಲ್ ಗೌಡ ಬಗ್ಗೆ ನಿಜ ವಿಚಾರ ಬಹಿರಂಗಪಡಿಸಿದ ನಟ ಚಂದನ್ ಕುಮಾರ್
ಬೆಂಗಳೂರು , ಗುರುವಾರ, 9 ಜುಲೈ 2020 (09:29 IST)
ಬೆಂಗಳೂರು: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾದ ಕನ್ನಡ ಕಿರುತೆರೆ ನಟ ಸುಶೀಲ್ ಗೌಡ ಬಗ್ಗೆ ಕಿರುತೆರೆಯ ಖ್ಯಾತ ನಾಯಕ ನಟ ಚಂದನ್ ಕುಮಾರ್ ಹೇಳಿಕೊಂಡಿದ್ದಾರೆ.


ಸುಶೀಲ್ ರನ್ನು 15 ವರ್ಷಗಳಿಂದ ಬಲ್ಲ ಚಂದನ್ ಅವರ ನಿಜ ಜೀವನದ ಬಗ್ಗೆ ಬಹಿರಂಗಪಡಿಸಿದ್ದಾರೆ. ‘ನನ್ನ ಗೆಳೆಯನ ಸಹೋದರ ಮತ್ತು ಕಾಲೇಜಿನಲ್ಲಿ ನನ್ನ ಜ್ಯೂನಿಯರ್ ಆಗಿದ್ದ ಸುಶೀಲ್ ನನಗೆ 15 ವರ್ಷಗಳಿಂದ ಪರಿಚಯ.

ಆತ ಒಬ್ಬ ಇಂಜಿನಿಯರ್, ಮಹತ್ವಾಕಾಂಕ್ಷಿ ಆದರೆ ನಟನಾಗಿ ಬೆಳೆಯಲು ಕಷ್ಟಪಡುತ್ತಿದ್ದ. ತುಂಬಾ ನಾಚಿಕೆ ಸ್ವಭಾವದವ. ಆದರೆ ಸಹೋದರ ನೀನು ಹೀಗೆ ಮಾಡಿಕೊಂಡಿದ್ದು ಸರಿಯಲ್ಲ. ನಿನ್ನ ಕುಟುಂಬ ಮತ್ತು ಸ್ನೇಹಿತರನ್ನು ದುಃಖಕ್ಕೆ ದೂಡಿ ನೀನು ಹೋದೆ.

ಕೆಲವು ವರ್ಷಗಳ ಹಿಂದೆ ನಿನಗೆ ಆಕ್ಸಿಡೆಂಟ್ ಆಗಿ ದವಡೆ, ಮೂಳೆಗೆ ವಿಪರೀತ ಪೆಟ್ಟಾಗಿತ್ತು. ಆದರೆ ನೀನು ಕಮ್ ಬ್ಯಾಕ್ ಮಾಡಿದೆ. ನಿನ್ನ ಸುತ್ತಲಿದ್ದವರಿಗೆ ಸ್ಪೂರ್ತಿಯಾದೆ. ಆದರೆ ಈಗ ನಿನ್ನ ಕುಟುಂಬದವರನ್ನು ಜೀವನಪರ್ಯಂತ ಅಶಾಂತಿಗೆ ದೂಡಿ ನೀನು ಶಾಂತಿಯುತವಾಗಿ ವಿರಮಿಸಿರುವೆ. ಇದು ದುರಂತ’ ಎಂದು ಚಂದನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಧಾ ರಮಣ ನಟ ಸುಶೀಲ್ ಗೌಡ ಆತ್ಮಹತ್ಯೆ ಬಗ್ಗೆ ಕಿರುತೆರೆ ನಟರು ಹೇಳಿದ್ದೇನು ಗೊತ್ತಾ?