Select Your Language

Notifications

webdunia
webdunia
webdunia
webdunia

ಕನ್ನಡತಿಯೊಂದಿಗೆ ಕಿರುತೆರೆಗೆ ಕಿರಣ್ ರಾಜ್ ಬ್ರೇಕ್

ಕನ್ನಡತಿಯೊಂದಿಗೆ ಕಿರುತೆರೆಗೆ ಕಿರಣ್ ರಾಜ್ ಬ್ರೇಕ್
ಬೆಂಗಳೂರು , ಶನಿವಾರ, 4 ಫೆಬ್ರವರಿ 2023 (09:10 IST)
Photo Courtesy: Twitter
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕನ್ನಡತಿ ಧಾರವಾಹಿ ಮುಕ್ತಾಯವಾಗಿದೆ. ಈ ಧಾರವಾಹಿಯ ನಾಯಕ ಹರ್ಷ ಅಲಿಯಾಸ್ ಕಿರಣ್ ರಾಜ್ ಮನೆ ಮಾತಾಗಿದ್ದರು.

ಈ ಧಾರವಾಹಿ ಮುಗಿದಿದ್ದು ಎಷ್ಟೋ ಜನರಿಗೆ ಬೇಸರ ತಂದಿದೆ. ಇದರ ನಡುವೆ ಮತ್ತೊಂದು ಬೇಸರದ ಸಂಗತಿಯಿದೆ. ಈ ಧಾರವಾಹಿ ಮುಗಿದ ಬಳಿಕ ಕಿರಣ್ ರಾಜ್ ನಾಯಕಿ ರಂಜಿನಿ ರಾಘವನ್ ಜೊತೆ ಇನ್ ಸ್ಟಾಗ್ರಾಂನಲ್ಲಿ ಲೈವ್ ಬಂದಿದ್ದರು.

ಈ ವೇಳೆ ಸದ್ಯಕ್ಕೆ ತಾವು ಕಿರುತೆರೆಯಿಂದ ಬ್ರೇಕ್ ಪಡೆಯುತ್ತಿರುವುದಾಗಿ ಹೇಳಿದ್ದಾರೆ. ಇನ್ನು ಮುಂದೆ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳುವುದಾಗಿ ಕಿರಣ್ ಹೇಳಿದ್ದಾರೆ. ಇದು ಅವರ ಕಿರುತೆರೆ ಅಭಿಮಾನಿಗಳಿಗೆ ಬೇಸರ ತಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ರೊಮ್ಯಾನ್ಸ್