Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಕನ್ನಡ: ಕೊನೆಗೂ ಮನೆಗೆ ಬಂದ ಶ್ರುತಿ ತಂದೆ ಹೇಳಿದ್ದೇನು?

ಬಿಗ್ ಬಾಸ್ ಕನ್ನಡ: ಕೊನೆಗೂ ಮನೆಗೆ ಬಂದ ಶ್ರುತಿ ತಂದೆ ಹೇಳಿದ್ದೇನು?
ಬೆಂಗಳೂರು , ಮಂಗಳವಾರ, 16 ಜನವರಿ 2018 (08:52 IST)
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಕಳೆದ ವಾರ ಎಲ್ಲರ ಕುಟುಂಬ ಸದಸ್ಯರು ಬಂದಿದ್ದರೂ ಶ್ರುತಿ ಪ್ರಕಾಶ್ ಮನೆಯಿಂದ ಯಾರೂ ಬಂದಿರಲಿಲ್ಲ. ಆದರೆ ಈ ವಾರದ ಮೊದಲ ದಿನವೇ ಶ್ರುತಿ ತಂದೆ ಪ್ರಕಾಶ್ ಅವರು ಮನೆಯೊಳಗೆ ಬಂದು ಸರ್ಪ್ರೈಸ್ ಕೊಟ್ಟರು.
 

ಶ್ರುತಿಯೂ ಫುಲ್ ಖುಷ್ ಆಗಿದ್ದರು. ಶ್ರುತಿ ಜತೆ ಸಾಕಷ್ಟು ಮಾತನಾಡಿದ ಅವರು ಕೊನೆಗೆ ಮನೆಯವರೊಡನೆ ಮಾತನಾಡುತ್ತಾ ಗಂಭೀರ ವಿಷಯವೊಂದನ್ನು ಪ್ರಸ್ತಾಪಿಸಿದರು.

ಇಷ್ಟು ದಿನವಾದ ಮೇಲೆ ಮೊದಲ ಬಾರಿಗೆ ಮನೆಯವರನ್ನು ಭೇಟಿಯಾದಾಗ ಖುಷಿಯಾಗಿರಬೇಕಲ್ವಾ? ಅದೇ ರೀತಿ ನಾವು ಸೇನೆಯಲ್ಲಿ ಕರ್ತವ್ಯದಲ್ಲಿರುವಾಗ ಎಷ್ಟೋ ದಿನಗಳವರೆಗೆ ಕುಟುಂಬದವರನ್ನು ನೋಡಿರುವುದಿಲ್ಲ. ಎಷ್ಟೋ ತಿಂಗಳುಗಳ ನಂತರ ನಮಗೆ ನೋಡಲು ಅವಕಾಶ ಸಿಗುತ್ತದೆ. ಅದೇ ರೀತಿ ಈಗಲೂ ಆಗಿದೆ’ ಎಂದು ಸ್ವತಃ ಸೇನಾ ವೃತ್ತಿಯಲ್ಲಿರುವ ಪ್ರಕಾಶ್ ಹೇಳಿಕೊಂಡರು. ಅವರು ಮನೆಯಿಂದ ನಿರ್ಗಮಿಸುವಾಗ ಮನೆಯ ಇತರ ಸದಸ್ಯರು ಜೈ ಹಿಂದ್ ಎಂದು ಬೀಳ್ಕೊಟ್ಟರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೊನ್ನೆ ಪುನೀತ್ ರಾಜ್ ಕುಮಾರ್ ಮಾಡಿದ ಕೆಲಸವನ್ನು ಈಗ ಜಗ್ಗೇಶ್ ಮಾಡಿದರು!