Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಕನ್ನಡ: ಮತ್ತೆ ಶುರುವಾಯ್ತು ಸ್ಪರ್ಧಿಗಳಿಗೆ ಅದೇ ಭಯ!

ಬಿಗ್ ಬಾಸ್ ಕನ್ನಡ: ಮತ್ತೆ ಶುರುವಾಯ್ತು ಸ್ಪರ್ಧಿಗಳಿಗೆ ಅದೇ ಭಯ!
ಬೆಂಗಳೂರು , ಶನಿವಾರ, 28 ಡಿಸೆಂಬರ್ 2019 (07:47 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಶೋನಲ್ಲಿ ಮತ್ತೊಂದು ವಾರ ಕಳೆದಿರುವ ಸ್ಪರ್ಧಿಗಳಿಗೆ ಈಗ ಮತ್ತೆ ಎಲಿಮಿನೇಷನ್ ಭೀತಿ ಶುರುವಾಗಿದೆ. ಇಂದು ಮತ್ತು ನಾಳೆ ಎಲಿಮಿನೇಷನ್ ಪ್ರಕ್ರಿಯೆ ನಡೆಯಲಿದೆ.


ಕಿಚ್ಚ ಸುದೀಪ್ ಈ ವಾರ ಜೋಕರ್ ಆಗಿ ಮನೆ ಒಳಗೆ ಪ್ರವೇಶ ಮಾಡಿ ಶಾಕ್ ಕೊಟ್ಟಿದ್ದರು. ಆ ವಿಚಾರ ಖಂಡಿತವಾಗಿಯೂ ವಾರದ ಕತೆ ಕಿಚ್ಚನ ಜತೆ ಕಾರ್ಯಕ್ರಮದಲ್ಲಿ ಪ್ರಸ್ತಾಪವಾಗಲಿದೆ. ಅದರ ಜತೆಗೆ ಟಾಸ್ಕ್ ಸಂದರ್ಭದಲ್ಲಿ ಕ್ಯಾಪ್ಟನ್ ಹರೀಶ್ ರಾಜ್ ನಡೆದುಕೊಂಡ ರೀತಿ ಬಗ್ಗೆಯೂ ಪ್ರಸ್ತಾಪವಾಗುವ ಸಾಧ್ಯತೆಯಿದೆ.

ಅದರ ಜತೆಗೆ ಎಲಿಮಿನೇಷನ್ ಪ್ರಕ್ರಿಯೆ ನಡೆಯಲಿದ್ದು, ಒಂದು ಬಿಗ್ ವಿಕೆಟ್ ಬೀಳುವುದು ಗ್ಯಾರಂಟಿಯಾಗಿದೆ. ಈ ವಾರ ಹೊರಹೋಗಲು ಚೈತ್ರಾ ಕೋಟೂರು, ಭೂಮಿ ಶೆಟ್ಟಿ, ವಾಸುಕಿ ವೈಭವ್,  ಶೈನ್ ಶೆಟ್ಟಿ ಮತ್ತು ಚಂದನ್ ಆಚಾರ್ ನಾಮಿನೇಟ್ ಆಗಿದ್ದರು. ಇವರ ಪೈಕಿ ಯಾರು ಹೋಗುತ್ತಾರೆ ಎಂದು ಕಾದು ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ಯೂರಿಯಾಸಿಟಿ ಹುಟ್ಟುಹಾಕ್ತಿದೆ "ಆದ್ಯಾ" ಫಸ್ಟ್ ಲುಕ್ ಪೋಸ್ಟರ್