Select Your Language

Notifications

webdunia
webdunia
webdunia
webdunia

ಸದ್ಯದಲ್ಲೇ ಹೊಸ ಪ್ರಾಜೆಕ್ಟ್ ಬಗ್ಗೆ ಮಾಹಿತಿ ನೀಡುವುದಾಗಿ ಮಾಹಿತಿ ಕೊಟ್ಟ ನಟ ಅನಿರುದ್ಧ್

ಸದ್ಯದಲ್ಲೇ ಹೊಸ ಪ್ರಾಜೆಕ್ಟ್ ಬಗ್ಗೆ ಮಾಹಿತಿ ನೀಡುವುದಾಗಿ ಮಾಹಿತಿ ಕೊಟ್ಟ ನಟ ಅನಿರುದ್ಧ್
ಬೆಂಗಳೂರು , ಬುಧವಾರ, 14 ಸೆಪ್ಟಂಬರ್ 2022 (08:50 IST)
ಬೆಂಗಳೂರು: ಜೊತೆ ಜೊತೆಯಲಿ ಧಾರವಾಹಿಯಿಂದ ಹೊರಬಂದ ಮೇಲೆ ನಟ ಅನಿರುದ್ಧ್ ಜತ್ಕಾರ್ ರನ್ನು ಬೇರೊಂದು ಶೋನಲ್ಲಿ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಕಿರುತೆರೆ ನಿರ್ಮಾಪಕರ ಸಂಘ ಅನಿರುದ್ಧ್ ಅವರನ್ನು ಎರಡು ವರ್ಷಗಳ ಕಾಲ ಯಾವುದೇ ರಿಯಾಲಿಟಿ ಶೋ, ಧಾರವಾಹಿಗಳಲ್ಲಿ ಹಾಕಿಕೊಳ್ಳದಂತೆ ಎಲ್ಲಾ ವಾಹಿನಿಗಳಿಗೆ ಮನವಿ ಮಾಡಿತ್ತು. ಹಾಗಿದ್ದರೂ ಅವರೇ ನಿರ್ಮಾಣ ಮಾಡಿ ನಟಿಸುವುದಿದ್ದರೆ ಅದಕ್ಕೆ ತಮ್ಮ ಅಭ್ಯಂತರವಿಲ್ಲ ಎಂದಿತ್ತು.

ಇದೀಗ ಅಭಿಮಾನಿಗಳು ಸೃಜನ್ ಲೋಕೇಶ್ ರಂತೇ ಯಾರ ಹಂಗೂ ಇಲ್ಲದೇ ನೀವೇ ನಿರ್ಮಾಣ ಮಾಡಿ ಹೊಸ ಶೋನಲ್ಲಿ ಬನ್ನಿ ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಅನಿರುದ್ಧ್ ಪ್ರತಿಕ್ರಿಯಿಸಿದ್ದು, ಸದ್ಯದಲ್ಲೇ ನಿಮಗೆ ಹೊಸ ಪ್ರಾಜೆಕ್ಟ್ ಬಗ್ಗೆ ಮಾಹಿತಿ ನೀಡುತ್ತೇನೆ ಎಂದಿದ್ದಾರೆ. ಬಿಗ್ ಬಾಸ್ ಶೋನಲ್ಲಿ ಅನಿರುದ್ಧ್ ಪಾಲ್ಗೊಳ್ಳುತ್ತಾರೆ ಎಂಬ ಸುದ್ದಿಯಿತ್ತು. ಆದರೆ ನಾನು ಬಿಗ್ ಬಾಸ್ ಗೆ ಹೋಗ್ತಾ ಇಲ್ಲ ಎಂದು ಸ್ವತಃ ಅನಿರುದ್ಧ್ ಸ್ಪಷ್ಟನೆ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬ್ರಹ್ಮಾಸ್ತ್ರ ಕೋಟಿ ಕೋಟಿ ಗಳಿಕೆ ಸುಮ್ಮನೇ ಬಿಲ್ಡಪ್ಪಾ?