Publish Date: Thu, 10 Nov 2022 (08:16 IST)
Updated Date: Thu, 10 Nov 2022 (08:58 IST)
ಗಾಂಧೀನಗರ : ಗುಜರಾತ್ನಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನವೇ ಕಾಂಗ್ರೆಸ್ಗೆ ಮತ್ತೊಂದು ಆಘಾತಎದುರಾಗಿದೆ.
ಪಕ್ಷದ ಶಾಸಕ ಝಲೋದ್ ಭವೇಶ್ ಕಟಾರಾ ಅವರು ಬುಧವಾರ ಸ್ಪೀಕರ್ ನಿಮಾಬೆನ್ ಆಚಾರ್ಯ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಒಂದೇ ದಿನ ರಾಜೀನಾಮೆ ನೀಡಿದ ಕಾಂಗ್ರೆಸ್ ನಾಯಕರಲ್ಲಿ ಎರಡನೇಯವರು ಝಲೋದ್ ಭವೇಶ್ ಕಟಾರಾ ಅವರಾಗಿದ್ದಾರೆ.
ಇದಕ್ಕೂ ಮುನ್ನ ಗುಜರಾತ್ನ ತಲಾಲಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಭಗವಾನ್ಭಾಯ್ ಡಿ ಬರಾದ್ ಅವರು ಕಾಂಗ್ರೆಸ್ನ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ನೀಡಿದ್ದರು.