Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ನವರು ಉಗ್ರರಿಗೆ ಬಿರಿಯಾನಿ ತಿನ್ನಿಸುತ್ತಿದ್ದರು ಎಂದ ಯೋಗಿ ಆದಿತ್ಯನಾಥ್

ಕಾಂಗ್ರೆಸ್ ನವರು ಉಗ್ರರಿಗೆ ಬಿರಿಯಾನಿ ತಿನ್ನಿಸುತ್ತಿದ್ದರು ಎಂದ ಯೋಗಿ ಆದಿತ್ಯನಾಥ್
ನವದೆಹಲಿ , ಮಂಗಳವಾರ, 27 ನವೆಂಬರ್ 2018 (09:12 IST)
ನವದೆಹಲಿ: ಕಾಂಗ್ರೆಸ್ ನವರು ಉಗ್ರರಿಗೆ ಬಿರಿಯಾನಿ ತಿನಿಸಿ ಉಪಚರಿಸುತ್ತಿದ್ದರು ನಾವು ಗುಂಡು ನೀಡಿ ಪಾಠ ಕಲಿಸುತ್ತಿದ್ದೇವೆ.. ಹೀಗಂತ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿಕೊಂಡಿದ್ದಾರೆ.

ರಾಜಸ್ಥಾನ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್ ಕಾಂಗ್ರೆಸ್ ವಿರುದ್ಧ ಈ ರೀತಿ ವಾಗ್ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲ, ಕಾಂಗ್ರೆಸ್ ಆಡಳಿತದಲ್ಲಿದ್ದಾಗ ದೇಶದಲ್ಲಿ ಉಗ್ರರ ಉಪಟಳ ತಾರಕಕ್ಕೇರಿತ್ತು ಎಂದೂ ಅವರು ಆರೋಪಿಸಿದ್ದಾರೆ.

ಮುಂಬೈ ದಾಳಿಕೋರ ಅಜ್ಮಲ್ ಕಸಬ್ ಬಿರಿಯಾನಿ ಬೇಕೆಂದು ಕೇಳಿದ್ದ ಎಂದು ಈ ಹಿಂದೆ ನ್ಯಾಯವಾದಿ ಉಜ್ವಲ್ ನಿಕಂ ಹೇಳಿದ್ದರು. ಅದೇ ಹೇಳಿಕೆ ಉಲ್ಲೇಖಿಸಿ ಯೋಗಿ ಈ ರೀತಿ ಟೀಕಿಸಿದ್ದಾರೆ. ಆದರೆ ಯೋಗಿ ಆದಿತ್ಯನಾಥ್ ಟೀಕೆ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ನಿಕಂ ಆವತ್ತು ನಾನು ಪ್ರಕರಣದ ವಿಚಾರಣೆಗಾಗಿ ಹಾಗೊಂದು ಹೇಳಿಕೆ ನೀಡಿದ್ದೆನಷ್ಟೇ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ತೀರಿಕೊಂಡ ನನ್ನ ಅಪ್ಪನನ್ನು ರಾಜಕೀಯಕ್ಕೆ ಯಾಕೆ ಎಳೆಯುತ್ತೀರಿ: ಪ್ರಧಾನಿ ಮೋದಿ ಕೆಂಡಾಮಂಡಲ