Select Your Language

Notifications

webdunia
webdunia
webdunia
webdunia

ಬಿಜೆಪಿ ಆರೋಪ ಕಪೋಲಕಲ್ಪಿತ ಎಂದ ಡಿಸಿಎಂ

ಬಿಜೆಪಿ ಆರೋಪ ಕಪೋಲಕಲ್ಪಿತ ಎಂದ ಡಿಸಿಎಂ
ಮಂಗಳೂರು , ಶನಿವಾರ, 24 ನವೆಂಬರ್ 2018 (19:27 IST)
ಫೋನ್ ಕದ್ದಾಲಿಕೆ ಕುರಿತು ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಮಾಡುತ್ತಿರುವ ಆರೋಪದ ಕುರಿತು ಡಿಸಿಎಂ ತಿರುಗೇಟು ನೀಡಿದ್ದಾರೆ.

ಬಿಜೆಪಿ ಆರೋಪ ಕಪೋಲಕಲ್ಪಿತವಾಗಿದೆ. ಫೋನ್ ಕದ್ದಾಲಿಕೆಯಂತಹ ಯಾವುದೇ ಪ್ರಯತ್ನವನ್ನು ನಾವು ಮಾಡಿಲ್ಲ. ಹೀಗಂತ  ಮಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.

ಸರ್ಕಾರ  ಟೇಕ್ ಆಫ್ ಆಗಿಲ್ಲ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು,  ಯಾವ ಅರ್ಥದಲ್ಲಿ ಅವರು ಹಾಗೆ ಹೇಳಿದ್ದಾರೆ ಗೊತ್ತಿಲ್ಲ. ಅವರನ್ನು ವಿಚಾರಿಸುತ್ತೇನೆ ಎಂದರು.

ಇನ್ನು ರಾಮಮಂದಿರ ವಿಷಯವನ್ನು ಚುನಾವಣೆ ಬಂದಾಗ ಮಾತ್ರ ಎತ್ತಲಾಗುತ್ತಿದೆ. ಚುನಾವಣೆ ಹತ್ತಿರ ಬಂದಾಗ ಬಿಜೆಪಿಯವರು ರಾಮ ಮಂದಿರದ ವಿಷಯ ಎತ್ತಿದ್ದಾರೆ. ಇದು ಕೇವಲ ರಾಜಕೀಯ ನಾಟಕವಾಗಿದೆ. ಜನಗಳ ಭಾವನೆಗಳ ಜೊತೆ ಬಿಜೆಪಿ ಚೆಲ್ಲಾಟ ಆಡುತ್ತಿದೆ ಎಂದು ಟೀಕೆ ಮಾಡಿದರು.

 

 

Share this Story:

Follow Webdunia kannada

ಮುಂದಿನ ಸುದ್ದಿ

ಶನಿದೇವರ ಪೂಜೆ ಬರ್ತಿದ್ದವರು ಶಿವನ ಪಾದ ಸೇರಿದ್ರು!