Select Your Language

Notifications

webdunia
webdunia
webdunia
webdunia

ಅನಂತ ಕುಮಾರ್ ಹೆಗಡೆಗೆ ಪ್ರಕಾಶ್ ರೈ ಬರೆದ ಪತ್ರದಲ್ಲಿ ಏನಿದೆ ಗೊತ್ತಾ...?

ಅನಂತ ಕುಮಾರ್ ಹೆಗಡೆಗೆ ಪ್ರಕಾಶ್ ರೈ ಬರೆದ ಪತ್ರದಲ್ಲಿ ಏನಿದೆ ಗೊತ್ತಾ...?
ನವದೆಹಲಿ , ಮಂಗಳವಾರ, 26 ಡಿಸೆಂಬರ್ 2017 (12:30 IST)
ನವದೆಹಲಿ: ಜಾತ್ಯಾತೀತರಿಗೆ ತಂದೆ-ತಾಯಿ ಇಲ್ಲ ಎಂಬರ್ಥದಲ್ಲಿ ಮಾತನಾಡಿ ವಿವಾದ ಸೃಷ್ಟಿಸಿದ ಕೇಂದ್ರ ಸಚಿವ ಅನಂತ ಕುಮಾರ್ ಅವರ ಹೇಳಿಕೆಗೆ ಬಹುಭಾಷಾ ನಟ ಪ್ರಕಾಶ್ ರೈ ಅವರು ಪತ್ರದ ಮೂಲಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

'ಹೆಗಡೆ ಇಂತಹ ಹೇಳಿಕೆಯ ಮೂಲಕ ದ್ವೇಷ ಹುಟ್ಟುಹಾಕುತ್ತಿದ್ದಾರೆ. ಜಾತ್ಯಾತೀತ ಎಂದರೆ ವೈವಿಧ್ಯಮಯ ಧರ್ಮಗಳನ್ನು ಗೌರವಿಸುವುದು ಹಾಗೂ ಒಪ್ಪಿಕೊಳ್ಳುವುದಾಗಿದೆ' ಎಂದು ಹೇಳಿದ್ದಾರೆ.

'ಜಾತ್ಯಾತೀತ ಎಂದರೆ ಯಾವುದೇ ಧರ್ಮ ಅಥವಾ ನಂಬಿಕೆಯ ಜತೆ ಗುರುತಿಸಿಕೊಳ್ಳದಿರುವುದಲ್ಲ. ನಿಮ್ಮದು ಒಂದು ಅಗ್ಗದ ಹೇಳಿಕೆಯಾಗಿದೆ. ಒಬ್ಬನ ಪೋಷಕರ ಬಗ್ಗೆ ಇಷ್ಟೊಂದು ಕೀಳಾಗಿ ಮಾತನಾಡಿರುವುದು ನನಗೆ ತುಂಬಾ ಅಚ್ಚರಿ ಉಂಟು ಮಾಡಿದೆ' ಎಂದು ಪ್ರಕಾಶ್ ರೈ ಹೆಗಡೆಗೆ ಮುಕ್ತ ಪತ್ರವೊಂದನ್ನು ಬರೆದಿದ್ದಾರೆ.

'ಜಾತ್ಯಾತೀತರು ಎಂದರೆ ತಂದೆ-ತಾಯಿ ಇಲ್ಲದವರು' ಎಂದು ಅನಂತ ಕುಮಾರ್ ಹೆಗಡೆ ಜಾತ್ಯಾತೀತರನ್ನು ಟೀಕಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವ್ಯಾಟ್ಸಾಪ್ ಉಪಯೋಗಿಸುತ್ತಿದ್ದೀರಾ…? ಹಾಗಾದರೆ ನಿಮಗೊಂದು ಬೇಸರದ ವಿಷಯವಿದೆ ನೋಡಿ!