Select Your Language

Notifications

webdunia
webdunia
webdunia
webdunia

ಟಿಪ್ಪು ಸುಲ್ತಾನ್ ಜಯಂತಿ ಆಚರಿಸಬೇಡಿ ಎನ್ನುವ ನಿಮ್ಮ ಉದ್ದೇಶವೇನು? : ಸಿಎಂ ಯೋಗಿಗೆ ಪ್ರಕಾಶ್ ರೈ ತರಾಟೆ

ಟಿಪ್ಪು ಸುಲ್ತಾನ್ ಜಯಂತಿ ಆಚರಿಸಬೇಡಿ ಎನ್ನುವ ನಿಮ್ಮ ಉದ್ದೇಶವೇನು? : ಸಿಎಂ ಯೋಗಿಗೆ ಪ್ರಕಾಶ್ ರೈ ತರಾಟೆ
ಬೆಂಗಳೂರು , ಶುಕ್ರವಾರ, 22 ಡಿಸೆಂಬರ್ 2017 (12:22 IST)
ಬೆಂಗಳೂರು: ಬಿಜೆಪಿ ನಾಯಕರ ಮೇಲೆ ತಮ್ಮ ವಾಗ್ದಾಳಿ ಮುಂದುವರಿಸಿರುವ ನಟ ಪ್ರಕಾಶ್ ರೈ ಇದೀಗ ನಿನ್ನೆಯಷ್ಟೇ ರಾಜ್ಯಕ್ಕೆ ಬಂದು ಭಾಷಣ ಮಾಡಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಕಿಡಿ ಕಾರಿದ್ದಾರೆ.
 

ನಿನ್ನೆ ಸಿಎಂ ಯೋಗಿ ಟಿಪ್ಪು ಸುಲ್ತಾನ್ ಜಯಂತಿ ಆಚರಿಸುವ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದರು. ಟಿಪ್ಪು ಜಯಂತಿ ಆಚರಿಸುವ ಬದಲು ಹನುಮಾನ್ ಜಯಂತಿ ಆಚರಿಸಿ ಎಂದು ಕರೆ ನೀಡಿದ್ದರು.

ಇದಕ್ಕೆ ಪ್ರಕಾಶ್ ರೈ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಯೋಗಿ ಜೀ ಕರ್ನಾಟಕದಲ್ಲಿ ಬಂದು ಟಿಪ್ಪು ಸುಲ್ತಾನ್ ಜಯಂತಿ ಆಚರಿಸಬೇಡಿ, ಇದು ಹನುಮಾನ್ ಹುಟ್ಟಿದ ನೆಲ ಎಂದು ಕರೆ ನೀಡುತ್ತಾರೆ. ಹಾಗಿದ್ದರೆ ನಿಮ್ಮ ಅಜೆಂಡಾ ಏನು?’ ಎಂದು ಟ್ವಿಟರ್ ನಲ್ಲಿ ಪ್ರಕಾಶ್ ರೈ ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ನನ್ನದು ಧ್ವನಿ ಹತ್ತಿಕ್ಕುವವರ ವಿರುದ್ಧದ ಧ್ವನಿ ಎಂಬ ತಮ್ಮ ಹಳೆಯ ಟ್ವೀಟ್ ನ್ನು ರಿಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗೋವಾ ಸಿಎಂ ಮಾಡ್ತಿರೋದು ಡರ್ಟಿ ಪೊಲಿಟಿಕ್ಸ್: ಎಂಬಿ ಪಾಟೀಲ್