Select Your Language

Notifications

webdunia
webdunia
webdunia
webdunia

ಗೋವಾ ಸಿಎಂ ಮಾಡ್ತಿರೋದು ಡರ್ಟಿ ಪೊಲಿಟಿಕ್ಸ್: ಎಂಬಿ ಪಾಟೀಲ್

ಗೋವಾ ಸಿಎಂ ಮಾಡ್ತಿರೋದು ಡರ್ಟಿ ಪೊಲಿಟಿಕ್ಸ್: ಎಂಬಿ ಪಾಟೀಲ್
ಬೆಂಗಳೂರು , ಶುಕ್ರವಾರ, 22 ಡಿಸೆಂಬರ್ 2017 (11:34 IST)
ಬೆಂಗಳೂರು: ಮಹದಾಯಿ ಜಲ ವಿವಾದ ವಿಚಾರದಲ್ಲಿ ಕರ್ನಾಟಕ ಸಿಎಂಗೆ ಪತ್ರ ಬರೆಯುವ ಬದಲು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಪತ್ರ ಬರೆದ ಗೋವಾ ಸಿಎಂ ಮನೋಹರ್ ಪರಿಕ್ಕರ್ ರದ್ದು ಡರ್ಟಿ ಪೊಲಿಟಿಕ್ಸ್ ಎಂದು ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಟೀಕಿಸಿದ್ದಾರೆ.
 

ನಿನ್ನೆಯಷ್ಟೇ ಬಿಜೆಪಿ ನಾಯಕರು ದೆಹಲಿಯಲ್ಲಿ ಅಮಿತ್ ಶಾ ಮಧ್ಯಸ್ಥಿಕೆಯಲ್ಲಿ ಗೋವಾ ಸಿಎಂ ಪರಿಕ್ಕರ್ ಜತೆ ಜಲ ವಿವಾದ ಕುರಿತು ಚರ್ಚಿಸಿದ್ದರು. ಇದಕ್ಕೆ ಸಿಎಂ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದರು. ಸರ್ಕಾರದ ನಡುವೆ ಮಾತುಕತೆ ನಡೆಯದೇ ಗೋವಾ ಸಿಎಂ ಜತೆ ಮಾತುಕತೆ ನಡೆಸಲು ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಯಾರು ಎಂದು ಸಿಎಂ ಕಿಡಿಕಾರಿದ್ದರು.

ಈ ವಿವಾದ ಕುರಿತಂತೆ ತಮ್ಮ ನಿಲುವನ್ನು ಗೋವಾ ಸಿಎಂ ಇದೀಗ ಯಡಿಯೂರಪ್ಪನವರ ಜತೆ ಪತ್ರ ಮುಖೇನ ವ್ಯವಹಾರ ನಡೆಸಿರುವುದು ರಾಜ್ಯ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಪಾಟೀಲ್, ನಮ್ಮ ಸಿಎಂ ಗೋವಾ ಸಿಎಂಗೆ ಪತ್ರ ಬರೆದರೆ ಡರ್ಟಿ ಪೊಲಿಟಿಕ್ಸ್ ಎನ್ನುತ್ತಾರೆ. ಈಗ ಅವರು ನೇರವಾಗಿ ಸಿಎಂ ಜತೆ ಮಾತುಕತೆ ನಡೆಸದೇ ಬಿಜೆಪಿ ಅಧ್ಯಕ್ಷರ ಜತೆ ಮಾತುಕತೆ ನಡೆಸಿರುವ ಪರಿಕ್ಕರ್ ಕ್ರಮ ಡರ್ಟಿ ಪೊಲಿಟಿಕ್ಸ್ ಅಲ್ಲವೇ ಎಂದಿದ್ದಾರೆ.

ಆದರೆ ನಾವು ನೀರಿನ ವಿಚಾರದಲ್ಲಿ ರಾಜಕಾರಣ ಮಾಡಿಕೊಂಡು ಕೂರುವುದಿಲ್ಲ. ನಾಲ್ಕು ಜಿಲ್ಲೆಗಳ ನೀರಿನ ಸಮಸ್ಯೆಗೆ ಪ್ರಾಮಾಣಿಕವಾಗಿ ಪರಿಹಾರ ಕಂಡುಕೊಳ್ಳಲು ಎಲ್ಲಾ ಮಾರ್ಗಗಳನ್ನು ಮುಕ್ತವಾಗಿಟ್ಟುಕೊಳ್ಳುತ್ತೇವೆ ಎಂದು ಸಚಿವ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಾವನ ಪರ ಚುನಾವಣಾ ಪ್ರಚಾರ ಮಾಡ್ತಾರಾ ನಟಿ ಅಮೂಲ್ಯ?