Select Your Language

Notifications

webdunia
webdunia
webdunia
webdunia

ವಾಜಪೇಯಿಯವರ ನಿಧನದ ವಿಚಾರವನ್ನು ಮುಚ್ಚಿಟ್ಟಿದ್ರಂತೆ ಬಿಜೆಪಿಯವರು. ಈ ರೀತಿ ಹೇಳಿದವರು ಯಾರು ಗೊತ್ತಾ?

ವಾಜಪೇಯಿಯವರ ನಿಧನದ ವಿಚಾರವನ್ನು ಮುಚ್ಚಿಟ್ಟಿದ್ರಂತೆ ಬಿಜೆಪಿಯವರು. ಈ ರೀತಿ ಹೇಳಿದವರು ಯಾರು ಗೊತ್ತಾ?
ಮುಂಬೈ , ಮಂಗಳವಾರ, 28 ಆಗಸ್ಟ್ 2018 (10:10 IST)
ಮುಂಬೈ : ಬಿಜೆಪಿ ಅವರ ಮೇಲೆ ಒಂದಲ್ಲ ಒಂದು ರೀತಿಯಲ್ಲಿ  ಆರೋಪ ಮಾಡುತ್ತಾ ಬಂದಿರುವ ಶಿವಸೇನೆ ಇದೀಗ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ನಿಧನದ ವಿಚಾರವನ್ನು ಮುಚ್ಚಿಟ್ಟಿದ್ದರು ಎಂದು ಆರೋಪಿಸಿದೆ.


ಸಂಸದ ಸಂಜಯ್ ರಾವತ್ ಅವರು ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಬರೆದ ಸಂಪಾದಕೀಯದಲ್ಲಿ ಈ ಅನುಮಾನವನ್ನು ಹೊರಹಾಕಿದ್ದಾರೆ. ವಾಜಪೇಯಿ ಹಲವು ದಿನಗಳಿಂದ ಆಸ್ಪತ್ರೆಯಲ್ಲಿಯೇ ಇದ್ದರು, ಆಗಸ್ಟ್ 12 ಮತ್ತು 13 ರಂದು ಅವರ ಆರೋಗ್ಯ ತುಂಬಾ ಹದಗೆಟ್ಟಿತ್ತು. ಬಹುಶಃ ಅವರು ಮೊದಲೇ ನಿಧನರಾಗಿದ್ದರು.


ಒಂದು ವೇಳೆ ವಾಜಪೇಯಿ ಸಾವಿನ ಸುದ್ದಿಯನ್ನು ಆಗಸ್ಟ್ 15 ಕ್ಕೂ ಮೊದಲೇ ಹೇಳಿದರೆ, ಪ್ರಧಾನಿ ಮೋದಿ ಅವರ ಸ್ವಾತಂತ್ರ್ಯ ದಿನದ ಭಾಷಣಕ್ಕೆ ಅಡ್ಡಿಯಾಗಬಹುದು ಎಂಬ ಕಾರಣಕ್ಕೆ ಬಿಜೆಪಿ ಹೀಗೆ ಮಾಡಿದೆ ಎಂದು ಲೇಖನದಲ್ಲಿ ಬರೆದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಕೆಟ್ ಆಟಗಾರ ಮೊಸದ್ದೀಕ್ ಹುಸೇನ್ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ದಾಖಲು