Select Your Language

Notifications

webdunia
webdunia
webdunia
webdunia

ಬಿಜೆಪಿ ಉಸ್ತುವಾರಿ ಮುರಳಿಧರ್ ರಾವ್ ವಿರುದ್ಧ 2.17 ಕೋಟಿ ವಂಚನೆ ಕೇಸ್

ಬಿಜೆಪಿ ಉಸ್ತುವಾರಿ ಮುರಳಿಧರ್ ರಾವ್ ವಿರುದ್ಧ 2.17 ಕೋಟಿ ವಂಚನೆ ಕೇಸ್
ಹೈದ್ರಾಬಾದ್ , ಬುಧವಾರ, 27 ಮಾರ್ಚ್ 2019 (18:15 IST)
ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯದಡಿ ಬರುವ ಫಾರ್ಮಾಎಕ್ಸಿಲ್ ಕಂಪೆನಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡುವುದಾಗಿ ನಂಬಿಸಿ 2,17 ಕೋಟಿ ರೂ ವಂಚಿಸಿದ್ದಾರೆ ಎಂದು ಹೈದ್ರಾಬಾದ್ ಮೂಲದ ಉದ್ಯಮಿಯೊಬ್ಬರು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜ್ಯ ಉಸ್ತುವಾರಿ ಹೊತ್ತಿರುವ ಪಿ.ಮುರಳಿಧರ್ ರಾವ್ ವಿರುದ್ಧ ವಂಚನೆ ಕೇಸ್ ದಾಖಲಿಸಿದ್ದಾರೆ.
ಹೈದ್ರಾಬಾದ್ ಮೂಲದ ಚಂಪಾಪೇಟ್ ಪ್ರದೇಶದಲ್ಲಿ ವಾಸವಾಗಿರುವ ಉದ್ಯಮಿ ತಲ್ಲಾ ಮಹಿಪಾಲ್ ರೆಡ್ಡಿ ಮತ್ತು ಅವರ ಪತ್ನಿ ತಲ್ಲಾ ಪ್ರವರ್ನಾ ರೆಡ್ಡಿ ರಾಚಕೊಂಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಸೂರೂರ್‌ನಗರ್ ಪೊಲೀಸ್ ಸ್ಟೇಶನ್‌ನಲ್ಲಿ ದೂರು ದಾಖಲಿಸಿದ್ದಾರೆ.
  
ಆರೋಪಿ ಪಿ.ಮುರಳಿಧರ್ ರಾವ್ ವಿರುದ್ಧ 406, 420, 468, 471, 506 ಕಾಯ್ದೆಯಡಿ ಪಿ.ಮುರಳಿಧರ್ ರಾವ್ ಸೇರಿದಂತೆ ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

Share this Story:

Follow Webdunia kannada

ಮುಂದಿನ ಸುದ್ದಿ

ಧಾರವಾಡ ಆಯ್ತು ಈಗ ಹುಬ್ಬಳ್ಳಿಯಲ್ಲಿ ಕಟ್ಟಡ ಕುಸಿತ