Select Your Language

Notifications

webdunia
webdunia
webdunia
webdunia

ಶ್ರೀಕೃಷ್ಣ ಜನ್ಮಾಷ್ಠಮಿ ನೆಪದಲ್ಲಿ ವ್ಯಾಪಾರಿಗಳಿಂದ ಹಣ ಕಿತ್ತುಕೊಂಡ ಪೊಲೀಸರು!

ಶ್ರೀಕೃಷ್ಣ ಜನ್ಮಾಷ್ಠಮಿ ನೆಪದಲ್ಲಿ ವ್ಯಾಪಾರಿಗಳಿಂದ ಹಣ ಕಿತ್ತುಕೊಂಡ ಪೊಲೀಸರು!
ಕಾನ್ಪುರ , ಗುರುವಾರ, 18 ಆಗಸ್ಟ್ 2022 (09:10 IST)
ಕಾನ್ಪುರ: ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಎಲ್ಲರೂ ಭಕ್ತಿಭಾವದಿಂದ ಆಚರಿಸುತ್ತಿದ್ದರೆ, ಉತ್ತರ ಪ್ರದೇಶದ ಕಾನ್ಪುರ ಪೊಲೀಸರು ಮಾತ್ರ ಕೃಷ್ಣ ಜನ್ಮಾಷ್ಠಮಿಯ ನೆಪದಲ್ಲಿ ಸುಲಿಗೆ ಮಾಡಿದ್ದಾರೆ.

ರೈಲ್ವೇ ನಿಲ್ದಾಣದಲ್ಲಿ ಅಂಗಡಿ ಇಟ್ಟುಕೊಂಡಿರುವ ವ್ಯಾಪಾರಿಗಳಿಗೆ ಕೃಷ್ಣ ಜನ್ಮಾಷ್ಠಮಿ ನಿಮಿತ್ತ ದೇಣಿಗೆ ಎಂದು ರೈಲ್ವೇ ಪೊಲೀಸರು 2,100 ರೂ. ವಸೂಲಿ ಮಾಡಿದ್ದಾರೆ. ಇದಕ್ಕೆ ವಿಶೇಷ ರಸೀತಿಯನ್ನೂ ಮಾಡಿಸಿಕೊಂಡಿದ್ದು, ವ್ಯಾಪಾರಿಗಳಿಂದ ಸುಲಿಗೆ ಮಾಡಿದ್ದಾರೆ.

ಈ ಬಗ್ಗೆ ವ್ಯಾಪಾರಿಗಳು ಆರೋಪ ಮಾಡಿದ್ದು, ದೇವರ ಹೆಸರಲ್ಲಿ ಪೊಲೀಸರು ಸಾವಿರಾರು ರೂ. ಕಿತ್ತುಕೊಳ್ಳುತ್ತಿದ್ದಾರೆ ಎಂದಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇನ್ಮುಂದೆ ಭಕ್ತರಿಂದ ಆನ್‍ಲೈನ್ ಕಾಣಿಕೆ