Select Your Language

Notifications

webdunia
webdunia
webdunia
webdunia

ಪತ್ನಿ ಮುನಿಸಿಕೊಂಡು ತವರು ಮನೆಗೆ ಹೋಗಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಪೊಲೀಸ್ ಸಿಬ್ಬಂದಿ

ಪತ್ನಿ ಮುನಿಸಿಕೊಂಡು ತವರು ಮನೆಗೆ ಹೋಗಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಪೊಲೀಸ್ ಸಿಬ್ಬಂದಿ
ಚೆನ್ನೈ , ಮಂಗಳವಾರ, 24 ನವೆಂಬರ್ 2020 (06:41 IST)
ಚೆನ್ನೈ : ದೀಪಾವಳಿ ಹಬ್ಬದಂದು ಕರ್ತವ್ಯ ನಿರ್ವಹಿಸಿದ್ದಕ್ಕೆ ಪತ್ನಿ ಮುನಿಸಿಕೊಂಡಿದ್ದಾಳೆಂದು ಬೇಸರಗೊಂಡ ಪೊಲೀಸ್ ಸಿಬ್ಬಂದಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಗಣೇಶ್ (26) ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಸಿಬ್ಬಂದಿ. ಇವರು ಪೂನಮಲ್ಲಿಯಲ್ಲಿ ವಿಶೇಷ ಪೊಲೀಸರ 13ನೇ ಬೆಟಾಲಿಯನ್ ನಲ್ಲು ಸೇವೆ ಸಲ್ಲಿಸುತ್ತಿದ್ದರು. ದೀಪಾವಳಗೆ ಮನೆಗೆ ಬರುವುದಾಗಿ ಪತ್ನಿಗೆ ಭರವಸೆ ನೀಡಿದ್ದರು. ಆದರೆ ಅಂದು ಬರಲು ಆಗದ ಕಾರಣ ಮುನಿಸಿಕೊಂಡ ಪತ್ನಿ ಅವರ ಜೊತೆ ಜಗಳವಾಡಿ ತವರು ಮನೆಗೆ ಹೋಗಿದ್ದಾಳೆ. ಬಳಿಕ ಆಕೆಯನ್ನು ಕರೆದುಕೊಂಡು ಬರಲು ಹೋದಾಗ ಆಕೆ ಬರಲು ನಿರಾಕರಿಸಿದ್ದಾಳೆ.

ಇದರಿಂದ ಬೇಸರಗೊಂಡ ಪೊಲೀಸ್ ಸಿಬ್ಬಂದಿ ವಿಷ ಸೇವಿಸಿದ್ದಾರೆ. ಇದನ್ನು ನೋಡಿದ ಅವರು ಸ್ನೇಹಿತ ಆಸ್ಪತ್ರೆಗೆ ದಾಖಲಿಸಿದ್ದರೂ ಆತ ಸಾವನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಾನು ನೀಡಿದ್ದ ಸಾಲ ಪಡೆಯಲು ಮನೆಗೆ ಬಂದ ಹುಡುಗಿಗೆ ಸಾಲಗಾರ ಮಾಡಿದ್ದೇನು ಗೊತ್ತಾ?