Publish Date: Mon, 29 Jan 2018 (10:16 IST)
Updated Date: Mon, 29 Jan 2018 (10:18 IST)
ನವದೆಹಲಿ: ಪ್ರಧಾನಿ ಮೋದಿ ಮನ್ ಕೀ ಬಾತ್ ನಲ್ಲಿ ದರ್ಶನ್ ಹೆಸರು ಪ್ರಸ್ತಾಪ ಮಾಡಿದ್ದಾರೆ. ಆದರೆ ದರ್ಶನ್ ಎಂದ ಮಾತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದುಕೊಳ್ಳಬೇಡಿ.
ಪ್ರಧಾನಿ ಹೇಳಿದ ದರ್ಶನ್ ಕರ್ನಾಟಕದವರೇ. ಮೈಸೂರಿನ ದರ್ಶನ್ ಎಂಬವರ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆಯ ಮಾತನಾಡಿದ್ದಾರೆ.
ಮೈ ಗವರ್ನಮೆಂಟ್ ಆಪ್ ಮೂಲಕ ದರ್ಶನ್, ಜನ ಔಷಧ ಮಳಿಗೆ ಯೋಜನೆಯಿಂದ ತನಗೆ ಹೇಗೆ ಲಾಭವಾಯಿತು ಎಂದು ಹೇಳಿಕೊಂಡಿದ್ದರು. ಅದರ ಬಗ್ಗೆ ಪ್ರಸ್ತಾಪಿಸಿರುವ ಮೋದಿ ದರ್ಶನ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ದೇವದಾಸಿಯರ ಕಲ್ಯಾಣಕ್ಕಾಗಿ ಹೋರಾಡುತ್ತಿರುವ ಸೀತವ್ವ ಜೋಡಟ್ಟಿಗೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ