Select Your Language

Notifications

webdunia
webdunia
webdunia
webdunia

ಚುನಾವಣಾ ಸಮಾವೇಶದಲ್ಲಿ ಮಾತನಾಡಿ ಗಂಟಲಿಗೆ ಅಪಾಯ ತಂದುಕೊಂಡ ನವಜೋತ್ ಸಿಂಗ್ ಸಿಧು!

ಚುನಾವಣಾ ಸಮಾವೇಶದಲ್ಲಿ ಮಾತನಾಡಿ ಗಂಟಲಿಗೆ ಅಪಾಯ ತಂದುಕೊಂಡ ನವಜೋತ್ ಸಿಂಗ್ ಸಿಧು!
ನವದೆಹಲಿ , ಮಂಗಳವಾರ, 14 ಮೇ 2019 (07:28 IST)
ನವದೆಹಲಿ: ಪಂಜಾಬ್ ಸಚಿವ, ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿದ್ದವರು. ಇದೀಗ ವಿಚಿತ್ರ ಕಾರಣಕ್ಕೆ ಸುದ್ದಿಯಾಗಿದ್ದಾರೆ.


ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಸಮಾವೇಶಗಳಲ್ಲಿ ನಿರಂತರವಾಗಿ ಮಾತನಾಡಿದ ಸಿಧು ಇದೀಗ ಧ್ವನಿ ಪೆಟ್ಟಿಗೆ ತೊಂದರೆ ತಂದುಕೊಂಡಿದ್ದಾರೆ!

28 ದಿನಗಳಲ್ಲಿ 80 ರ್ಯಾಲಿಗಳಲ್ಲಿ ಭಾಗವಹಿಸಿ ಭಾಷಣ ಮಾಡಿರುವ ಸಿಧು ಗಂಟಲಿಗೆ ಇದೀಗ ತೊಂದರೆಯಾಗಿದೆಯಂತೆ. ಇದೀಗ ಗಂಟಲಿನ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಸದ್ಯಕ್ಕೆ ಭಾಷಣಗಳಿಗೆ ಫುಲ್ ಸ್ಟಾಪ್ ಹಾಕಿರುವ ಸಿಧು ವಿಶ್ರಾಂತಿ ಪಡೆಯುತ್ತಿದ್ದಾರೆ. ಸದ್ಯದಲ್ಲೇ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂಬ ವಿಶ್ವಾಸದಲ್ಲಿ ಸಿಧು ಇದ್ದಾರೆ ಎಂದು ಅವರ ಆಪ್ತ ಮೂಲಗಳಿಂದ ತಿಳಿದುಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಮೊಬೈಲ್ ನ್ನು ಮರೆತು ಬರುವವರಿಗಾಗಿ ಬಂದಿದೆ ಈ ಹೊಸ ಜಾಕೆಟ್