Select Your Language

Notifications

webdunia
webdunia
webdunia
webdunia

ಮೈತ್ರಿ ಸರಕಾರ ಪತನ?: ಕಾಂಗ್ರೆಸ್ ನವರು ಅವರ ದಾರಿ ನೋಡಿಕೊಳ್ಳಲಿ ಎಂದ ಜೆಡಿಎಸ್

ಮೈತ್ರಿ ಸರಕಾರ ಪತನ?: ಕಾಂಗ್ರೆಸ್ ನವರು ಅವರ ದಾರಿ ನೋಡಿಕೊಳ್ಳಲಿ ಎಂದ ಜೆಡಿಎಸ್
ಬೆಂಗಳೂರು , ಸೋಮವಾರ, 13 ಮೇ 2019 (13:11 IST)
ಕಾಂಗ್ರೆಸ್ ನವರಿಗೆ ಕಷ್ಟ ಆದ್ರೆ ಅವರ ದಾರಿ ಅವರು ನೋಡಿಕೊಳ್ಳಲಿ ಎಂದು ಜೆಡಿಎಸ್ ರಾಜ್ಯಸಭಾ ಸದಸ್ಯ ಹೊಸ ಬಾಂಬ್ ಸಿಡಿಸಿದ್ದಾರೆ.

ಕಾಂಗ್ರೆಸ್ ನವರು ಅವರ ದಾರಿ ಅವರು ನೋಡಿಕೊಳ್ಳಲಿ. ಅದನ್ನ ಬಿಟ್ಟು ಸಿಎಂಗೆ ತೊಂದರೆ ಕೊಡೋದು ಬೇಡ. ಬೇಕಾದ್ರೆ ಅವರ ದಾರಿ ಅವರು ನೋಡಿಕೊಳ್ಳಲಿ. ಹೀಗಂತ ಜೆಡಿಎಸ್ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಕುಪ್ಪೇಂದ್ರ ರೆಡ್ಡಿ ಹೇಳಿಕೆ ನೀಡಿದ್ದಾರೆ.

ಸದಾಶಿವನಗರದ ಡಿಸಿಎಂ ಪರಮೇಶ್ವರ್ ನಿವಾಸದಲ್ಲಿ ನಡೆದ ಸಭೆ ಬಳಿಕ ಮಾತನಾಡಿದ ಕುಪೇಂದ್ರ ರೆಡ್ಡಿ, ಎರಡು ಪಕ್ಷಗಳಿಗಿಂತ ಜೆಡಿಎಸ್ ಗೆ ಕಡಿಮೆ ಸೀಟ್ ಇರೋದು ನಿಜ. ಆದ್ರೆ ನಾವು ಯಾರ ಮನೆ ಬಾಗಿಲಿಗೂ ಹೋಗಿರಲಿಲ್ಲ. ಅವರೇ ಮುಖ್ಯಮಂತ್ರಿ ಮಾಡ್ತೀವಿ ಅಂತಾ ಬಂದಿದ್ರು.

ಗುಲಾಂ ನಬಿ ಅಜಾದ್ ಜೊತೆ ನಡೆದ ಮಾತುಕತೆ ವೇಳೆ ನಾನು ಇದ್ದೆ. ಆದ್ರೀಗ ಮುಖ್ಯಮಂತ್ರಿಗಳ ವಿರುದ್ಧ ಹಾದಿಬೀದಿಯಲ್ಲಿ ಮಾತಾಡೋದು ಸರಿಯಲ್ಲ ಅಂತಾ ಕಾಂಗ್ರೆಸ್ಸಿನವರಿಗೆ ಜೆಡಿಎಸ್ ರಾಜ್ಯಸಭಾ ಸದಸ್ಯ ಕುಂಪೇಂದ್ರ ರೆಡ್ಡಿ ತಿರುಗೇಟು ನೀಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ರಾಜಕೀಯಕ್ಕಾಗಿ ಪತ್ನಿಯನ್ನು ಬಿಟ್ಟವರು ಮೋದಿ: ಮಾಯಾವತಿ ವೈಯಕ್ತಿಕ ಟೀಕೆ