Publish Date: Mon, 13 May 2019 (08:01 IST)
Updated Date: Mon, 13 May 2019 (08:03 IST)
ನವದೆಹಲಿ: ಎಲ್ಲರೂ ತಪ್ಪದೇ ಮತದಾನ ಮಾಡಬೇಕು ಎಂದು ಹೇಳುವ ಪ್ರಮುಖ ರಾಜಕಾರಣಿಗಳೇ ಮತದಾನ ಮಾಡದಿದ್ದರೆ ಹೇಗೆ? ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಕೂಡಾ ಹೀಗೇ ಮಾಡಿ ಟೀಕೆಗೊಳಗಾಗಿದ್ದಾರೆ.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆಗಿರುವ ದಿಗ್ವಿಜಯ್ ಸಿಂಗ್ ಗೆ ರಾಜ್ ಘರ್ ನಲ್ಲಿ ಮತದಾನವಿದೆ. ಆದರೆ ಅಲ್ಲಿಯವರೆಗೆ ತಮಗೆ ಪ್ರಯಾಣ ಮಾಡಲು ಕಷ್ಟ ಎಂಬ ಕಾರಣಕ್ಕೆ ದಿಗ್ವಿಜಯ್ ಸಿಂಗ್ ಮತದಾನ ಮಾಡಿಲ್ಲ.
ಈ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ಹೌದು, ನಾನು ವೋಟ್ ಮಾಡಲಿಲ್ಲ. ನನಗೆ ರಾಜ್ ಘರ್ ವರೆಗೆ ಪ್ರಯಾಣ ಮಾಡಲು ಕಷ್ಟವಾಗಿತ್ತು. ಮುಂದಿನ ಬಾರಿ ನನ್ನ ವೋಟ್ ನ್ನು ಭೋಪಾಲ್ ಗೆ ವರ್ಗಾಯಿಸುವೆ ಎಂದು ದಿಗ್ವಿಜಯ್ ಸಿಂಗ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ