Select Your Language

Notifications

webdunia
webdunia
webdunia
webdunia

ಬಿಸಿಲೂರಿನಲ್ಲಿ ಸಿದ್ದರಾಮಯ್ಯ ಭರ್ಜರಿ ಕ್ಯಾಂಪೇನ್ ವೇಳೆ ಏನಾಯ್ತು?

ಬಿಸಿಲೂರಿನಲ್ಲಿ ಸಿದ್ದರಾಮಯ್ಯ ಭರ್ಜರಿ ಕ್ಯಾಂಪೇನ್ ವೇಳೆ ಏನಾಯ್ತು?
ಕಲಬುರಗಿ , ಭಾನುವಾರ, 12 ಮೇ 2019 (13:09 IST)
ಮೇ 19ರಂದು ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನಲೆಯಲ್ಲಿ ಕೈ-ಕಮಲ ಪಡೆ ಪ್ರಚಾರ ತೀವ್ರಗೊಳಿಸಿದ್ದು, ಘಟಾನುಘಟಿ ನಾಯಕರು ಮತಬೇಟೆ ಮುಂದಾಗಿದ್ದಾರೆ.

ಚಿಂಚೋಳಿ ವಿಧಾನಸಭಾ ಕ್ಷೇತ್ರದ ಮೂರು ಪ್ರಮುಖ ಕೇಂದ್ರಗಳಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಚಾರ ನಡೆಸುತ್ತಿದ್ದಾರೆ.
ಸಿದ್ದರಾಮಯ್ಯಗೆ ಸಾಥ್ ನೀಡಿದ್ದಾರೆ ಸಂಸದ ಮಲ್ಲಿಕಾರ್ಜುನ ಖರ್ಗೆ, ಗೃಹ ಸಚಿವ ಎಂ.ಬಿ.ಪಾಟೀಲ್ ಇತರ ಕೈ ಪಡೆ ಮುಖಂಡರು.

ಚಿಂಚೋಳಿ ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಠೋಡ್ ಪರ ಮತಯಾಚನೆ ಮಾಡುತ್ತಿದ್ದಾರೆ 'ಕೈ' ನಾಯಕರು.

ಇನ್ನು ಬಿಜೆಪಿಯಿಂದಲೂ ಚಿಂಚೋಳಿ ಕ್ಷೇತ್ರದ ವಿವಿಧೆಡೆ ಚುನಾವಣಾ ಪ್ರಚಾರ ನಡೆಯುತ್ತಿದೆ. ಮಾಜಿ ಸಚಿವರಾದ ವ್ಹಿ.ಸೋಮಣ್ಣ, ಬಾಬುರಾವ್ ಚಿಂಚನಸೂರ್ ನೇತೃತ್ವದಲ್ಲಿ ಪ್ರಚಾರ ನಡೆಯುತ್ತಿದೆ.

ಬಿಜೆಪಿ ಅಭ್ಯರ್ಥಿ ಡಾ.ಅವಿನಾಶ್ ಜಾಧವ್ ಪರ ಮತಯಾಚಿಸುತ್ತಿದ್ದಾರೆ ಬಿಜೆಪಿ‌ ನಾಯಕರು.



Share this Story:

Follow Webdunia kannada

ಮುಂದಿನ ಸುದ್ದಿ

ಬೈ ಎಲೆಕ್ಷನ್: ಮಠಾಧೀಶರ ಭೇಟಿಗೆ ಕಾಂಗ್ರೆಸ್-ಬಿಜೆಪಿ ಬಿಗ್ ಫೈಟ್