Webdunia - Bharat's app for daily news and videos

Install App

ಉಗ್ರರನ್ನು ಹೇಗೆ ಸಾಯಿಸಬೇಕು ಅಂದ್ರೆ ನಮ್ಮ ಮುಖದಲ್ಲಿ ಬೆವರಿಳಿದ ಹಾಗೆ ಅವರಿಗೂ ಬೆವರು ಬರಬೇಕು: ಮಂಜುನಾಥ್ ಪತ್ನಿ

Krishnaveni K
ಗುರುವಾರ, 24 ಏಪ್ರಿಲ್ 2025 (15:14 IST)
Photo Credit: X
ಶಿವಮೊಗ್ಗ: ಪಹಲ್ಗಾಮ್ ನಲ್ಲಿ ಉಗ್ರರ ದಾಳಿಗೆ ಪತಿ ಸಾವನ್ನಪ್ಪಿದ ಮಂಜುನಾಥ್ ಅಂತ್ಯಕ್ರಿಯೆ ವೇಳೆ ಪತ್ನಿ ಪಲ್ಲವಿ ಮಾಧ್ಯಮಗಳ ಮುಂದೆ ಆಕ್ರೋಶ ಹೊರಹಾಕಿದ್ದಾರೆ. ಉಗ್ರರನ್ನು ಹೇಗೆ ಸಾಯಿಸಬೇಕು ಎಂದರೆ ನಮ್ಮ ಮುಖದಲ್ಲಿ ಬೆವರಿಳಿದ ಹಾಗೆ ಅವರ ಮುಖದಲ್ಲೂ ಬೆವರಿಳಿಯಬೇಕು ಎಂದಿದ್ದಾರೆ.

ಪತಿ ಮಂಜುನಾಥ್ ರನ್ನು ಕಣ್ಣೆದುರೇ ಉಗ್ರರು ಗುಂಡು ಹಾಕಿ ಸಾಯಿಸಿದ್ದಾರೆ. ಅವರಿಗೆ ಒಂದು ಕ್ಷಣವೂ ಅವಕಾಶ ಸಿಗಲಿಲ್ಲ. ನಮಗೆ ಏನಾಗುತ್ತಿದೆ ಎಂದು ಅರಿವಾಗುವಷ್ಟರಲ್ಲಿ ಅವರ ಪ್ರಾಣವೇ ಹೋಗಿತ್ತು ಎಂದು ಪಲ್ಲವಿ ಕಣ್ಣೀರು ಹಾಕಿದ್ದಾರೆ.

ಪತಿಯ ಸಾವನ್ನು ಈಗಲೂ ಅವರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಇದೆಲ್ಲಾ ಏನೋ ಒಂದು ಕನಸಿನಲ್ಲಿ ನಡೆಯುತ್ತಿದೆ ಎಂಬಂತಿದೆ. ಇಂದು ತಮ್ಮ ತವರು ಶಿವಮೊಗ್ಗಕ್ಕೆ ಮೃತದೇಹ ತಂದಾಗಲೂ ಅವರು ಮಾಧ್ಯಮಗಳ ಮುಂದೆ ತಮ್ಮ ನೋವು ತೋಡಿಕೊಂಡಿದ್ದಾರೆ.

ಉಗ್ರರಿಗೆ ಯಾವ ರೀತಿ ಶಿಕ್ಷೆ ಸಿಗಬೇಕು ಎಂದು ಆಶಿಸುತ್ತೀರಿ ಎಂದು ಕೇಳಿದಾಗ ‘ನೋಡಿ ಈಗ ನಮ್ಮ ಹಣೆಯಲ್ಲಿ ಬೆವರು ಹರಿತಿದ್ಯಲ್ವಾ? ಅದೇ ರೀತಿ ಉಗ್ರರ ಹಣೆಯಲ್ಲೂ ಬೆವರಿಳಿಸಿ ಸಾಯಿಸಬೇಕು’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಾರದ ಹಿಂದೆಯಷ್ಟೇ ಮುಂಬಡ್ತಿ ಪಡೆದಿದ್ದ ಡಿ ರೂಪಾ ಸೇರಿ ಹಲವು ಅಧಿಕಾರಿಗಳ ವರ್ಗಾವಣೆ

Raja Raghuvanshi murder case: ಮೇಘಾಲಯ SIT ಸೋನಮ್ ಮುಂದಿಡುವ ಪ್ರಶ್ನೆಗಳು ಹೀಗಿದೆ

Air India Flight Crash: ಅಪಘಾತದ ನಂತರದ ಸ್ಫೋಟ, ಬೆಂಕಿಯ ತೀವ್ರತೆಗೆ ಇದೇ ಕಾರಣ

Air India Flight Crash: ವಿಮಾನದಲ್ಲಿದ್ರು ಗುಜರಾತ್‌ನ ಮಾಜಿ ಸಿಎಂ, ಇಲ್ಲಿದೆ ಪುರಾವೆ

ಮುಂದಿನ ಸುದ್ದಿ
Show comments