Select Your Language

Notifications

webdunia
webdunia
webdunia
webdunia

ವಯನಾಡು ದುರಂತಕ್ಕೆ ಮಿಡಿದ ಕೇರಳ ಚರ್ಚ್‌ಗಳು: 100 ಮನೆಗಳ ನಿರ್ಮಾಣದ ಭರವಸೆ

ವಯನಾಡು ದುರಂತಕ್ಕೆ ಮಿಡಿದ ಕೇರಳ ಚರ್ಚ್‌ಗಳು: 100 ಮನೆಗಳ ನಿರ್ಮಾಣದ ಭರವಸೆ

Sampriya

ಕೇರಳ , ಮಂಗಳವಾರ, 6 ಆಗಸ್ಟ್ 2024 (17:29 IST)
ಕೇರಳ: ಮುಂಡಕೈ ಹಾಗೂ ಚುರಲ್ಮಲಾದಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಕೇರಳ ಕ್ಯಾಥೋಲಿಕ್ ಚರ್ಚ್ ನೇತೃತ್ವದಲ್ಲಿ 100 ಮನೆಗಳನ್ನು ನಿರ್ಮಿಸಲು ಕೇರಳ ಕ್ಯಾಥೋಲಿಕ್ ಬಿಷಪ್ಸ್ ಸಮಿತಿ (ಕೆಸಿಬಿಸಿ) ನಿರ್ಧರಿಸಿದೆ.

ಕಾಕನಾಡಿನ ಮೌಂಟ್ ಸೇಂಟ್ ಥಾಮಸ್ ನಲ್ಲಿ ಅಧ್ಯಕ್ಷ ಕಾರ್ಡಿನಲ್ ಬೆಸಿಲಿಯೋಸ್ ಕ್ಲೆಮಿಸ್ ಕಥೋಲಿಕಾ ಬಾವಾ ಅವರ ಅಧ್ಯಕ್ಷತೆಯಲ್ಲಿ ಆಗಸ್ಟ್ 5 ರಂದು ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಪ್ರಸ್ತುತ ಕೇರಳ ಕ್ಯಾಥೋಲಿಕ್ ಚರ್ಚ್‌ನ ಎಲ್ಲಾ ಧರ್ಮಪ್ರಾಂತ್ಯಗಳು, ಸಮುದಾಯಗಳು, ಚರ್ಚ್ ಸಂಸ್ಥೆಗಳು, ವ್ಯಕ್ತಿಗಳು ಮತ್ತು ವ್ಯವಸ್ಥೆಗಳು ವಿಪತ್ತು ನಿರ್ವಹಣಾ ಯೋಜನೆಯಲ್ಲಿ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ.

"ಮೊದಲ ಹಂತದಲ್ಲಿ ವಯನಾಡು ಮತ್ತು ವಿಲಂಗಾಡ್ ಪ್ರದೇಶಗಳಲ್ಲಿ ಭೂಮಿ, ಮನೆ ಮತ್ತು ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡಿರುವ 100 ಕುಟುಂಬಗಳಿಗೆ ಸರ್ಕಾರ ಸೂಚಿಸಿದ ಸ್ಥಳದಲ್ಲಿ ಮನೆಗಳನ್ನು ನೀಡಲಾಗುತ್ತದೆ. ಈ ಮನೆಗಳಿಗೆ ಅಗತ್ಯ ಗೃಹೋಪಯೋಗಿ ಉಪಕರಣಗಳನ್ನು ಸಹ ನೀಡಲಾಗುತ್ತದೆ" ಎಂದು ಸಮಿತಿ ತಿಳಿಸಿದೆ.

"ಕೇರಳ ಕ್ಯಾಥೋಲಿಕ್ ಚರ್ಚ್‌ನ ಸಾಮಾಜಿಕ ಸೇವಾ ಅಂಗವಾದ ಕೇರಳ ಸಾಮಾಜಿಕ ಸೇವಾ ವೇದಿಕೆಯು ಪರಿಹಾರ ಕಾರ್ಯವನ್ನು ಮುನ್ನಡೆಸುವ ಜವಾಬ್ದಾರಿಯನ್ನು ವಹಿಸಿದೆ. ಈ ಸೇವಾ ಘಟಕವು ಕೆಸಿಬಿಸಿಯ ನ್ಯಾಯ ಶಾಂತಿ ಮತ್ತು ಅಭಿವೃದ್ಧಿ ಆಯೋಗದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ" ಎಂದು ಅದು ಸೇರಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಡಾ ಬೆನ್ನಲ್ಲೇ ಸಿದ್ದರಾಮಯ್ಯಗೆ ಮತ್ತೊಂದು ಡಿನೋಟಿಫಿಕೇಷನ್ ಉರುಳು: ರಾಜೀನಾಮೆಗೆ ಹೆಚ್ಚಿದ ಒತ್ತಡ