Webdunia - Bharat's app for daily news and videos

Install App

ಮೋದಿಯಿಂದಾಗಿ ಮಹಿಳೆಯರು ಮಂಗಳಸೂತ್ರ ಕಳೆದುಕೊಳ್ಳುತ್ತಿದ್ದಾರೆ: ಜೈರಾಮ್ ರಮೇಶ್

Krishnaveni K
ಶನಿವಾರ, 4 ಜನವರಿ 2025 (15:12 IST)
ನವದೆಹಲಿ: ಪ್ರಧಾನಿ ಮೋದಿಯವರ ದುರಾಡಳಿತದಿಂದಾಗಿ ದೇಶದಲ್ಲಿ ಮಹಿಳೆಯರು ಮಂಗಳಸೂತ್ರವನ್ನು ಅಡವಿಟ್ಟು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ವಾಗ್ದಾಳಿ ನಡೆಸಿದ್ದಾರೆ.

ಭಾರತೀಯ ಕುಟುಂಬಗಳ ಸುಮಾರು 3 ಲಕ್ಷ ಕೋಟಿ ಚಿನ್ನದ ಮೇಲಿನ ಸಾಲ ಬಾಕಿ ಉಳಿದಿದೆ ಎಂಬ ವರದಿಗಳನ್ನು ಉಲ್ಲೇಖಿಸಿ ಜೈರಾಂ ರಮೇಶ್ ವಾಗ್ದಾಳಿ ನಡೆಸಿದ್ದಾರೆ. ಮಂಗಳಸೂತ್ರ ಕಸಿದುಕೊಳ್ಳುತ್ತಾರೆ ಎಂಬ ಕಾಲ್ಪನಿಕ ಕತೆ ಹರಿಯಬಿಟ್ಟು ಅತಿಮಾನುಷ ಪ್ರಧಾನಿಯೊಬ್ಬರು ಮಹಿಳೆಯರನ್ನು ಬೆದರಿಸುತ್ತಿದ್ದಾಗ, ಚಿನ್ನದ ಅಡಮಾನ ಸಾಲ ಪಡೆಯುವ ಪ್ರವೃತ್ತಿ ನಿಮ್ಮ ಅವಧಿಯಲ್ಲೇ ವಿಪರೀತವಾಗುತ್ತಿದೆ. ಭಾರತೀಯ ಕುಟುಂಬಗಳು ಪಡೆದಿರುವ ಸುಮಾರು 3 ಲಕ್ಷ ಕೋಟಿ ಚಿನ್ನದ ಮೇಲಿನ ಸಾಲ ಬಾಕಿ ಉಳಿದಿದೆ. ಹೆಚ್ಚುತ್ತಿರುವ ಸಾಲ, ಕುಸಿಯುತ್ತಿರುವ ಆರ್ಥಿಕತೆಯಿಂದಾಗಿ ಈ ಸಾಲ ತೀರಿಸಲಾಗುತ್ತಿಲ್ಲ.

ಜನರು ಶೇ.30 ರಷ್ಟು ಪ್ರಕರಣಗಳಲ್ಲಿ ಚಿನ್ನ ಅಡವಿಟ್ಟು ಪಡೆದ ಸಾಲ ತೀರಿಸಲಾಗುತ್ತಿಲ್ಲ. ಹೀಗಾಗಿ ಮಂಗಳ ಸೂತ್ರ ಮತ್ತಿತರ ಆಭರಣಗಳನ್ನು ಮಹಿಳೆಯರು ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆಲ್ಲಾ ಮೋದಿ ಸರ್ಕಾರದ ಕೆಲವರಿಗಷ್ಟೇ ಸೀಮಿತವಾದ ನಿಯಮ, ಅಸ್ಪಷ್ಟ ನೀತಿಗಳು ಕಾರಣ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಮಹಿಳೆಯರಿಂದ ಮಂಗಳಸೂತ್ರ ಕಸಿದುಕೊಳ್ಳುತ್ತಿರುವ ಏಕೈಕ ಸರ್ಕಾರವಿದು’ ಎಂದು ಜೈರಾಮ್ ರಮೇಶ್ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಕಾಂಗ್ರೆಸ್ ಬಂದರೆ ಮಹಿಳೆಯರು ಮಂಗಳಸೂತ್ರವನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂಬರ್ಥದಲ್ಲಿ ವಾಗ್ದಾಳಿ ನಡೆಸಿದ್ದರು. ಅದನ್ನಿಟ್ಟುಕೊಂಡು ಈಗ ಜೈರಾಮ್ ರಮೇಶ್ ತಿರುಗೇಟು ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Viral video: ಬೆಂಗಳೂರು ಡಿಆರ್ ಡಿಒ ಆಫೀಸರ್ ಮೇಲೆ ಕನ್ನಡಿಗನಿಂದ ಹಲ್ಲೆ ಕೇಸ್ ಗೆ ಟ್ವಿಸ್ಟ್: ಅಸಲಿಗೆ ನಡೆದದ್ದೇ ಬೇರೆಯೇ

DGP Om Prakash murder: ನಿವೃತ್ತ ಡಿಜಿಪಿ ಓಂ ಪ್ರಕಾಶ್ ಪತ್ನಿಗಿತ್ತು ಈ ಮಾನಸಿಕ ಕಾಯಿಲೆ

ಅಲಿಬಾಬ ಮತ್ತು 40 ಕಳ್ಳರ ಕಥೆಯ ತದ್ರೂಪವೇ ಸಿದ್ದರಾಮಯ್ಯರ ತಂಡ: ಡಿ.ವಿ. ಸದಾನಂದಗೌಡ

ಕಾಂಗ್ರೆಸ್ ಸರಕಾರವು ಜನರ ಪಾಲಿಗೆ ಬದುಕಿದ್ದೂ ಸತ್ತಂತಿದೆ: ಬಿ.ವೈ.ವಿಜಯೇಂದ್ರ

DGP Om Prakash murder: ಮೀನು ಊಟ ಮಾಡುತ್ತಿರುವಾಗಲೇ ಓಂ ಪ್ರಕಾಶ್ ಮೇಲೆ ನಡೆದಿತ್ತು ಡೆಡ್ಲೀ ಅಟ್ಯಾಕ್

ಮುಂದಿನ ಸುದ್ದಿ
Show comments