Select Your Language

Notifications

webdunia
webdunia
webdunia
webdunia

ರಾಮಮಂದಿರ ನಿರ್ಮಾಣ ಹೆಸರಿನಲ್ಲಿ ಚಂದಾ ಕೇಳಿ ವಂಚಿಸುವವರಿದ್ದಾರೆ ಎಚ್ಚರಿಕೆ!

ರಾಮಮಂದಿರ ನಿರ್ಮಾಣ ಹೆಸರಿನಲ್ಲಿ ಚಂದಾ ಕೇಳಿ ವಂಚಿಸುವವರಿದ್ದಾರೆ ಎಚ್ಚರಿಕೆ!
ನವದೆಹಲಿ , ಶುಕ್ರವಾರ, 11 ಸೆಪ್ಟಂಬರ್ 2020 (12:49 IST)
ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾದ ಬೆನ್ನಲ್ಲೇ ವಂಚಕರಿಗೆ ಇದುವೇ ಆದಾಯ ಗಳಿಕೆಗೆ ಮಾರ್ಗವಾಗಿದೆ.


ರಾಮಮಂದಿರ ನಿರ್ಮಾಣ ಮಾಡಲು ಚಂದಾ ಕೊಡಿ ಎಂದು ನಕಲಿ ಬ್ಯಾಂಕ್ ಖಾತೆ, ಟ್ರಸ್ಟ್ ಹೆಸರು ಹೇಳಿಕೊಂಡು ಜನರಿಂದ ಹಣ ವಸೂಲಿ ಮಾಡಿ ವಂಚಿಸುವವರಿದ್ದಾರೆ. ಹೀಗಾಗಿ ಚಂದಾ ಕೊಡುವ ಮೊದಲು ಎಚ್ಚರಿಕೆಯಿಂದಿರಿ. ಅದೇ ರೀತಿ ರಾಮಜನ್ಮ ಭೂಮಿ ಕಾರ್ಯದ ನೇತೃತ್ವ ವಹಿಸಿರುವ ರಾಮಜನ್ಮಭೂಮಿ ಟ್ರಸ್ಟ್ ನ ಬ್ಯಾಂಕ್ ಖಾತೆಯಿಂದ ನಕಲಿ ಚೆಕ್ ಸೃಷ್ಟಿಸಿ ಹಣ ಡ್ರಾ ಮಾಡಿರುವ ಘಟನೆಗಳೂ ವರದಿಯಾಗಿವೆ. ಈ ಬಗ್ಗೆ ಸ್ವತಃ ಟ್ರಸ್ಟ್ ದೂರು ದಾಖಲಿಸಿದೆ. ಹೀಗಾಗಿ ರಾಮಜನ್ಮಭೂಮಿ ಹೆಸರಿನಲ್ಲಿ ವಂಚನೆ ಮಾಡುವವರ ಬಗ್ಗೆ ಎಚ್ಚರಿಕೆಯಿಂದಿರುವುದು ಅಗತ್ಯ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ನಂಟು ಪ್ರಕರಣ; ಪರೋಕ್ಷವಾಗಿ ಶಾಸಕ ಜಮೀರ್ ವಿಚಾರಣೆ ಸುಳಿವು ನೀಡಿದ ಗೃಹ ಸಚಿವರು