Select Your Language

Notifications

webdunia
webdunia
webdunia
webdunia

ಶ್ರದ್ಧಾ ವಾಲ್ಕರ್ ನೆನಪಿಸಿದ ಬೆಂಗಳೂರಿನ ಹತ್ಯೆ ಪ್ರಕರಣ: ಶ್ರದ್ಧಾ ಆರೋಪಿ ಕತೆ ಏನಾಗಿದೆ

Shraddha Walker murder

Krishnaveni K

ಬೆಂಗಳೂರು , ಸೋಮವಾರ, 23 ಸೆಪ್ಟಂಬರ್ 2024 (09:37 IST)
ಬೆಂಗಳೂರು: ದೆಹಲಿಯ ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣ ಎಲ್ಲರಿಗೂ ನೆನಪಿರಬಹುದು. ಪ್ರಿಯಕರನಿಂದಲೇ ಬರ್ಬರವಾಗಿ ಹತ್ಯೆಯಾಗಿದ್ದ ಶ್ರದ್ಧಾಳನ್ನು ತುಂಡು ತುಂಡು ಮಾಡಿ ಫ್ರಿಡ್ಜ್ ನಲ್ಲಿರಿಸಲಾಗಿತ್ತು.

ಇದೀಗ ಅದೇ ಮಾದರಿಯಲ್ಲಿ ಬೆಂಗಳೂರಿನಲ್ಲಿ ಮಹಿಳೆಯೊಬ್ಬಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹತ್ಯೆ ಬಳಿಕ ಮೃತದೇಹವನ್ನು ಮೂರು ತುಂಡಾಗಿ ಕತ್ತರಿಸಿ ಫ್ರಿಡ್ಜ್ ನ್ಲಲಿರಿಸಲಾಗಿತ್ತು. ಈ ಪ್ರಕರಣ ಇಡೀ ಬೆಂಗಳೂರನ್ನು ಬೆಚ್ಚಿಬೀಳಿಸಿದೆ. ಇಲ್ಲೂ ಆಕೆಯ ಪ್ರಿಯಕರನೇ ಕೊಲೆ ಆರೋಪಿಯಾಗಿರಬಹುದು ಎಂದು ಶಂಕಿಸಲಾಗಿದೆ.

ದೆಹಲಿಯ ಶ್ರದ್ಧಾಳನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದ ಪ್ರಿಯಕರ ಸ್ನೇಹಿತ ಅಫ್ತಾಬ್ ಬಳಿಕ ಆಕೆಯ ಮೃತದೇಹವನ್ನು ಹಲವು ಪೀಸ್ ಮಾಡಿ ಫ್ರಿಡ್ಜ್ ನಲ್ಲಿಟ್ಟಿದ್ದ. ಬಳಿಕ ಒಂದೊಂದೇ ತುಂಡನ್ನು ಪ್ರತಿನಿತ್ಯ ಎಂಬಂತೆ ನಿರ್ಜನ ಪ್ರದೇಶದಲ್ಲಿ ಎಸೆಯುತ್ತಿದ್ದ. ಈ ಪ್ರಕರಣದಲ್ಲಿ ಆತನನ್ನು ದೆಹಲಿ ಪೊಲೀಸರು ಬಂಧಿಸಿದ್ದರು.

ಇದೀಗ ಆರೋಪಿ ತಿಹಾರ್ ಜೈಲಿನ ಸೆಲ್ ನಂ.4 ರಲ್ಲಿರಿಸಲಾಗಿದೆ. ಈತನ ಮೇಲೆ ಜೈಲು ಅಧಿಕಾರಿಗಳು ತೀವ್ರ ನಿಗಾ ಇಟ್ಟಿದ್ದಾರೆ. ಆತನಿಗೆ ಕೆಲವು ಗಂಟೆ ಕಾಲ ಮಾತ್ರ ಜೈಲಿನ ಹೊರಾವರಣದಲ್ಲಿ ವಾಕಿಂಗ್ ಗೆ ಅವಕಾಶವಿದೆ. ಉಳಿದಂತೆ ಜೈಲು ಕೊಠಡಿಯಲ್ಲೇ ಕಾಲ ಕಳೆಯಬೇಕಾಗಿದೆ. ಈತನಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಶ್ರದ್ಧಾ ತಂದೆ ಆಗ್ರಹಿಸುತ್ತಿದ್ದಾರೆ. 2022 ರಂದು ಈ ಘಟನೆ ನಡೆದಿತ್ತು. ಇದೀಗ ಅದೇ ಮಾದರಿಯಲ್ಲಿ ಬೆಂಗಳೂರಿನಲ್ಲೂ ಹತ್ಯೆ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಗೆ ಸೆಡ್ಡು ಹೊಡೆಯಲು ಬಿಜೆಪಿಯಿಂದಲೂ ಫ್ರೀ ಘೋಷಣೆ: ಈದ್, ಮೊಹರಂಗೆ ಫ್ರೀ ಸಿಲಿಂಡರ್