Select Your Language

Notifications

webdunia
webdunia
webdunia
webdunia

ವಿಮಾನದಲ್ಲಿ ವೃದ್ಧನಿಗೆ ರಕ್ತಸ್ರಾವ ಬೆನ್ನಲೇ ತುರ್ತು ಭೂಸ್ಪರ್ಶ

ವಿಮಾನದಲ್ಲಿ ವೃದ್ಧನಿಗೆ ರಕ್ತಸ್ರಾವ ಬೆನ್ನಲೇ ತುರ್ತು ಭೂಸ್ಪರ್ಶ
ಭೋಪಾಲ್ , ಭಾನುವಾರ, 15 ಜನವರಿ 2023 (08:54 IST)
ಭೋಪಾಲ್ : ಮಧುರೈನಿಂದ  ದೆಹಲಿಗೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಸಿದ ವೃದ್ಧ ಪ್ರಯಾಣಿಕೊಬ್ಬನೊಬ್ಬನ ಆರೋಗ್ಯದಲ್ಲಿ ಹದಗೆಟ್ಟ ಹಿನ್ನೆಲೆಯಲ್ಲಿ ಇಂದೋರ್ನಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು,

ಆದರೂ ಚಿಕಿತ್ಸೆ ಫಲಕಾರಿಯಾಗದೇ ಆದ ಮೃತಪಟ್ಟ ಘಟನೆ ನಡೆದಿದೆ. ನೋಯ್ಡಾ ನಿವಾಸಿಯಾದ ಅತುಲ್ ಗುಪ್ತಾ (60) ಮೃತ ಪ್ರಯಾಣಿಕ.

ಅತುಲ್ ಗುಪ್ತಾ ಮಧುರೈನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದರು. ಆದರೆ ಆ ವೇಳೆ ಅವರಿಗೆ ಬಾಯಿಯಿಂದ ರಕ್ತಸ್ರಾವವಾಗುತ್ತಿತ್ತು. ಅಷ್ಟೇ ಅಲ್ಲದೇ ವಿಮಾನದಲ್ಲಿರುವಾಗಲೇ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು.

ಈ ಹಿನ್ನೆಲೆಯಲ್ಲಿ ಮಧುರೈನಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನವನ್ನು ವೈದ್ಯಕೀಯ ತುರ್ತು ಪರಿಸ್ಥಿಯ ಹಿನ್ನೆಲೆಯಲ್ಲಿ ಇಂದೋರ್ನ ದೇವಿ ಅಹಲ್ಯಾಬಾಯಿ ಹೋಳ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತುಭೂಸ್ಪರ್ಶ ಮಾಡಲಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವ ದಾಖಲೆಗಾಗಿ ದಟ್ಟ ಮಂಜಿನಲ್ಲಿ ಯೋಗಾಭ್ಯಾಸ