Select Your Language

Notifications

webdunia
webdunia
webdunia
webdunia

ಬಹಿರ್ದೆಸೆಗೆ ಹೋದ ಬಾಲಕಿಯ ತಲೆ ಕಡಿದು ಊರೆಲ್ಲ ಸುತ್ತಿದ!

ಬಹಿರ್ದೆಸೆಗೆ ಹೋದ ಬಾಲಕಿಯ ತಲೆ ಕಡಿದು ಊರೆಲ್ಲ ಸುತ್ತಿದ!
ಭುವನೇಶ್ವರ , ಶನಿವಾರ, 26 ಮಾರ್ಚ್ 2022 (12:11 IST)
ಭುವನೇಶ್ವರ : ಮಲವಿಸರ್ಜನೆಗೆ ತೆರಳಿದ್ದ 8 ವರ್ಷದ ಬಾಲಕಿಯ ತಲೆ ಕಡಿದು, ರುಂಡದೊಂದಿಗೆ ಊರಿಡೀ ತಿರುಗಾಡಿದ ಘಟನೆ ಒಡಿಶಾದ ಜಾಜ್ಪುರ ಜಿಲ್ಲೆಯ, ಮಾನಕಿರಾ ಮಂಡಲದ ಗ್ರಾಮದಲ್ಲಿ ನಡೆದಿದೆ.

8 ವರ್ಷದ ಬಾಲಕಿ ಮೃತಳಾಗಿದ್ದಾಳೆ. ಈಕೆಯ ತಲೆಯನ್ನು ಕತ್ತರಿಸಿದ ಆರೋಪದ ಮೇಲೆ 30 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಾಲಕಿ ಬೆಳಿಗ್ಗೆ ಮಲವಿಸರ್ಜನೆಗೆಂದು ಹೊಲಕ್ಕೆ ಹೋಗಿದ್ದಳು. ಈ ವೇಳೆ ಅಲ್ಲಿ ವ್ಯಕ್ತಿಯೊಬ್ಬ ಕೊಡಲಿ ಹಿಡಿದು ನಿಂತಿದ್ದನು. ಆಕೆ ನೋಡಿದವನೆ ಆಕೆಯ ಹತ್ತಿರಕ್ಕೆ ಬಂದು ತಲೆ ಕಡಿದು ಕೊಡಲಿಯಿಂದ ಕತ್ತರಿಸಿಬಿಟ್ಟಿದ್ದಾನೆ.

ನಂತರ ತುಂಡರಿಸಿದ ತಲೆಯನ್ನು ಹೊತ್ತು ಊರೆಲ್ಲ ಸುತ್ತಿದ್ದಾನೆ. ಆರೋಪಿ ಪತ್ನಿ ಕೈಯಲ್ಲಿ ತುಂಡರಿಸಿದ ತಲೆಯನ್ನು ಕಂಡಾಗ ಆತನೊಂದಿಗೆ ಜಗಳವಾಡಿದ್ದಾಳೆ. ಆದರೆ ಅವನು ಕೊಡಲಿಯಿಂದ ಹೆಂಡತಿಯನ್ನು ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಇದಾದ ಬಳಿಕ ಆರೋಪಿ ಅಲ್ಲೇ ನೆಲದ ಮೇಲೆ ಮಲಗಿ ನಿದ್ದೆಗೆ ಜಾರಿದ್ದಾನೆ. 

ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. ಆತ ಮಾದಕ ವ್ಯಸನಿ, ಆದರೆ ಬುದ್ಧಿ ಮಾಂದ್ಯನಲ್ಲ ಎನ್ನುವುದು ಬೆಳಕಿಗೆ ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಲಸದಿಂದ ತೆಗೆದ ಕೋಪಕ್ಕೆ ಎಚ್ ಆರ್ ಕೊಲೆಗೆ ಯತ್ನ