Select Your Language

Notifications

webdunia
webdunia
webdunia
webdunia

ಬಾಡೂಟಕ್ಕೆ ಕರೆಯದ್ದಕ್ಕೆ ಕೋಪ: ಯುವಕನ ಕೊಲೆ

ಬಾಡೂಟಕ್ಕೆ ಕರೆಯದ್ದಕ್ಕೆ ಕೋಪ: ಯುವಕನ ಕೊಲೆ
ಅರಸೀಕೆರೆ , ಬುಧವಾರ, 19 ಜನವರಿ 2022 (09:40 IST)
ಅರಸೀಕೆರೆ: ಬಾಡೂಟಕ್ಕೆ ಕರೆಯದ ಕೋಪಕ್ಕೆ ಎರಡು ಗುಂಪುಗಳ ನಡುವೆ ನಡೆದ ಜಗಳ ತಾರಕಕ್ಕೇರಿ ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ. ಅರಸಿಕೆರೆಯ ಪುರ್ಲೆಹಳ್ಳಿಯಲ್ಲಿ ಇಂತಹದ್ದೊಂದು ದುರಂತ ಸಂಭವಿಸಿದೆ.

ದೇವರ ಹರಕೆ ನಿಮಿತ್ತ ಗ್ರಾಮದಲ್ಲಿ ಬಾಡೂಟ ಏರ್ಪಾಟಾಗಿತ್ತು. ಈ ಕಾರ್ಯಕ್ರಮಕ್ಕೆ ಮೃತ ಯುವಕ ಮತ್ತು ಕುಟುಂಬದವರು ತೆರಳಿದ್ದರು. ಆದರೆ ಆರೋಪಿಯನ್ನು ಆಹ್ವಾನಿಸಿರಲಿಲ್ಲ.

ಇದೇ ವಿಚಾರವಾಗಿ ಕೊಲೆಗೀಡಾದ ಯುವಕ ಮತ್ತು ಆರೋಪಿ ನಡುವೆ ಜಗಳವಾಗಿದೆ. ಇದೇ ವಿಚಾರವಾಗಿ ಆರೋಪಿ ಸ್ನೇಹಿತರ ಸಹಾಯದೊಂದಿಗೆ ಯುವಕ ಮತ್ತು ಕುಟುಂಬಸ್ಥರ ಮೇಲೆ ಮಾರಕಾಯುಧಗಳಿಂದ ದಾಳಿ ಮಾಡಿದ್ದಾನೆ. ಈ ವೇಳೆ ತೀವ್ರ ಗಾಯಗೊಂಡ ಯುವಕ ಸಾವನ್ನಪ್ಪಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಡಿಗೆದಾರ ಮಹಿಳೆಗೆ ಒಳ ಉಡುಪು ಗಿಫ್ಟ್! ಮಾಲಿಕನ ವಿರುದ್ಧ ಎಫ್ ಐಆರ್