Select Your Language

Notifications

webdunia
webdunia
webdunia
webdunia

ದಸರಾ ಸಂದರ್ಭದಲ್ಲಿಯೇ ಕಂಬಳ ಯಾಕೆ ಬೇಕು: ಕಂಬಳಕ್ಕೆ ಯದುವೀರ್ ಒಡೆಯರ್ ವಿರೋಧ

Yaduveer Wadiyar
ಮೈಸೂರು: ಈ ಬಾರಿ ದಸರಾದಲ್ಲಿ ಕಂಬಳ ಆಯೋಜಿಸುವ ಬಗ್ಗೆ ಸರ್ಕಾರ ತೀರ್ಮಾನ ಮಾಡಿರುವುದಕ್ಕೆ ರಾಜವಂಶಸ್ಥ, ಮೈಸೂರು ಸಂಸದ ಯದುವೀರ್ ಒಡೆಯರ್ ವಿರೋಧ ವ್ಯಕ್ತಪಡಿಸಿದ್ದಾರೆ.

ಮೈಸೂರು ದಸರಾದಲ್ಲಿ ಈ ಬಾರಿ  ವಿಶೇಷ ಆಕರ್ಷಣೆಯಾಗಿ ಕರಾವಳಿ ಭಾಗದ ಗ್ರಾಮೀಣ ಕ್ರೀಡೆ ಕಂಬಳ ಆಯೋಜಿಸುವುದಕ್ಕೆ ಸಿಎಂ ಡಿಕೆ ಶಿವಕುಮಾರ್ ಅನುಮತಿ ನೀಡಿದ್ದರು. ಇದಕ್ಕೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಗೆ ಜವಾಬ್ಧಾರಿ ವಹಿಸಿದ್ದರು.

ಆದರೆ ಕರಾವಳಿ ಭಾಗದ ಕ್ರೀಡೆಯನ್ನು ಮೈಸೂರು ದಸರಾದಲ್ಲಿ ಅಳವಡಿಸುತ್ತಿರುವುದಕ್ಕೆ ಯದುವೀರ್ ಒಡೆಯರ್ ವಿರೋಧ ವ್ಯಕ್ತಪಡಿಸಿದ್ದಾರೆ. ಮೈಸೂರು ದಸರಾ ಸಂದರ್ಭದಲ್ಲಿಯೇ ಕಂಬಳ ಯಾಕೆ? ಇದಕ್ಕೂ ಮೈಸೂರು ದಸರಾಗೂ ಸಂಬಂಧವಿಲ್ಲ. ಕಂಬಳ ಆಯೋಜಿಸುವುದಕ್ಕೆ ಮೈಸೂರು ಜನರ ವಿರೋಧವೂ ಇದೆ.

ಬೇರೆ ದಿನ ಬೇಕಾದರೆ ಮೈಸೂರಿನಲ್ಲಿ ಕಂಬಳ ಆಯೋಜಿಸಲಿ. ನಾವು ಮೈಸೂರಿನವರು ಎಲ್ಲಾ ರೀತಿಯ ಸಹಕಾರ ಕೊಟ್ಟು ಕಂಬಳ ಯಶಸ್ವಿಯಾಗಲು ಕೆಲಸ ಮಾಡುತ್ತೇವೆ. ಆದರೆ ದಸರಾ ಸಂದರ್ಭದಲ್ಲಿ ದಸರಾಗೆ ಸಂಬಂಧಪಡದ ಕಂಬಳ ಬೇಡ ಎಂದು ಯದುವೀರ್ ಒಡೆಯರ್ ಹೇಳಿದ್ದಾರೆ. ಇನ್ನು ಮಾಜಿ ಸಂಸದ ಪ್ರತಾಪ್ ಸಿಂಹ ಕೂಡಾ ಕಂಬಳ ಆಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ರೈಲ್ವೇ ಸ್ಟೇಷನ್ ನಲ್ಲಿ ಚಹಾ ಸೇವಿಸುವ ಮುನ್ನ ಈ ವಿಡಿಯೋ ತಪ್ಪದೇ ನೋಡಿ