Select Your Language

Notifications

webdunia
webdunia
webdunia
webdunia

ತೋಟದ ಮನೆಯಲ್ಲಿ ಡಬಲ್ ಮರ್ಡರ್ ಕಾರಣ ಏನು?

ತೋಟದ ಮನೆಯಲ್ಲಿ ಡಬಲ್ ಮರ್ಡರ್ ಕಾರಣ ಏನು?
ಮೈಸೂರು , ಬುಧವಾರ, 15 ಮೇ 2019 (11:36 IST)
ತಡರಾತ್ರಿ ತೋಟದ ಮನೆಯೊಂದರಲ್ಲಿ ವಯೋವೃದ್ಧ ದಂಪತಿ ಬರ್ಬರ ಹತ್ಯೆ ನಡೆದಿದೆ. ಇದರಿಂದ ಇಡೀ ಊರಿನ ಜನರು ಬೆಚ್ಚಿ ಬಿದ್ದಿದ್ದಾರೆ.

ಮೈಸೂರಿನಲ್ಲಿ ವಯೋವೃದ್ಧರ  ಮರ್ಡರ್ ಆಗಿದೆ. ಮೈಸೂರು ತಾಲೂಕಿನ ನಾಗವಾಲದ ತೋಟದ ಮನೆಯಲ್ಲಿ ಘಟನೆ ನಡೆದಿದೆ. ವಯೋವೃದ್ಧರ ತಲೆಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಮೈಸೂರು ಹುಣಸೂರು ಮುಖ್ಯ ರಸ್ತೆ ಸಮೀಪ ಇರೋ ತೋಟದ ಮನೆಯಲ್ಲಿ ಘಟನೆ ನಡೆದಿದೆ. ನಾಗವಾಲ ಈರತ್ತಣ್ಣ (80), ಪತ್ನಿ ಶಿವಮ್ಮ (75) ಬರ್ಬರ ಹತ್ಯೆಗೊಳಗಾದವರು.

ತೋಟದಲ್ಲಿದ್ದ ಸೆಂಟ್ರಿಂಗ್ ಸಾಮಾನು ನೋಡಿಕೊಂಡು ಅಲ್ಲೇ ಉಳಿದ್ದಿದ್ದರು ವೃದ್ಧ ದಂಪತಿ. 4 ಹೆಣ್ಣು ಮಕ್ಕಳು ಓರ್ವ ಗಂಡು ಮಗನನ್ನು ಹೊಂದಿರೋ ದಂಪತಿ ಕೊಲೆಯಾಗಿದ್ದಾರೆ.

ದಂಪತಿ ಕೊಲೆ ಯಾಕೆ ನಡೆದಿದೆ ಅನ್ನೋ ಬಗ್ಗೆ ಪೊಲೀಸರಿಂದ ತನಿಖೆ ನಡೆಯುತ್ತಿದೆ. ಸ್ಥಳಕ್ಕೆ ಇಲವಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಮೈಸೂರು ದಕ್ಷಿಣ ವಿಭಾಗದ ಡಿವೈಎಸ್ಪಿ ಕ್ಷಮಾ ಮಿಶ್ರ ಭೇಟಿ ನೀಡಿದ್ದಾರೆ. ಸ್ಥಳದಲ್ಲಿ ಶ್ವಾನದಳ, ಬೆರಳಚ್ಚು ದಳದಿಂದ ಪರಿಶೀಲನೆ ನಡೆದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ಡಿ.ಕೆ.ಶಿವಕುಮಾರ ಕಣ್ಣೀರು ಹಾಕಿದ್ದು ಏಕೆ?